2. ಬಾಲ್ಯದ ಬದುಕು
ಸಕರ್ಾರದ ಲೆಕ್ಕದಲ್ಲಿ ನಮ್ಮೂರು ಗ್ರಾಮವಲ್ಲ. ಗ್ರಾಮದ ವ್ಯಾಪ್ತಿಯಲ್ಲಿನ ಮಜರೆ ಹಳ್ಳಿ. ಪ್ರಾಯಃ ಮಜರೆ ಎಂದರೆ ಅಧಿಕೃತವಲ್ಲದ ವಸತಿ ಪ್ರದೇಶ ಎಂಬ ಅರ್ಥ ಸಕರ್ಾರದ ದಾಖಲೆಗಳಲ್ಲಿದೆಯೇನೊ .. `ಹೊಸನಗರ ತಾಲೂಕು ಹುಂಚಾ ಹೋಬಳಿ ಮೂಗುಡತಿ ಗ್ರಾಮದ ಮಜರೆ ಕೊಡಸೆ ವಾಸಿ..' ಎಂಬುದು ನಮ್ಮ ಹಳ್ಳಿಯ ಕುರಿತಾಗಿ ಸಕರ್ಾರಕ್ಕೆ ಅಹವಾಲು ಸಲ್ಲಿಸುವಾಗ ಮಾಡುತ್ತಿದ್ದ ಸಂಕ್ಷಿಪ್ತ ಪರಿಚಯ. ಕಂದಾಯ ಅಧಿಕಾರಿಗಳಲ್ಲಿ ಮಜರೆ ಎಂಬುದು ಸುಪರಿಚಿತ ಮಾಹಿತಿ. ಒಮ್ಮೆ ಹೊಸನಗರದ ತಹಶೀಲ್ದಾರ್ ಟಿ.ಕೆ. ರೂಪಕಲಾ ಅವರಲ್ಲಿ ನಮ್ಮೂರಿನ ಹೆಸರು ಹೇಳಿದ್ದಕ್ಕೆ `ಅದು ಮಜರೆ ಹಳ್ಳಿಯಲ್ಲವಾ?' ಎಂದು ತಮ್ಮ ನೆನಪನ್ನು ದೃಢಪಡಿಸಿಕೊಂಡಿದ್ದರು. ಅಂಥ ಹಳ್ಳಿಯೊಂದರಲ್ಲಿ ಹುಟ್ಟಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಲ್ಲದೆ ಪ್ರಜಾವಾಣಿ ಪತ್ರಿಕೆಯಲ್ಲಿ ಮೂರುದಶಕಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುವ ಅವಕಾಶ ಪಡೆದದ್ದು ನನ್ನ ಮಟ್ಟಿಗೆ ಅದೃಷ್ಟ. ಸಣ್ಣ ಮಟ್ಟದ ಸಾಹಿತ್ಯಕ ಕೆಲಸಗಳನ್ನೂ ಈ ಅವಧಿಯಲ್ಲಿ ಮಾಡಲು ಸಾಧ್ಯವಾಗಿದ್ದು ನನಗೆ ಆಶ್ಚರ್ಯಕರ ಸಂಗತಿ. ಅಕ್ಷರ ಪ್ರಪಂಚಕ್ಕೆ ಕಾಲಿರಿಸಿದ ಮೊದಲ ಪೀಳಿಗೆಯವನಾದ ನನಗೆ ಬರವಣಿಗೆ ಬದುಕಿನ ಮಾರ್ಗವಾಗಿ ಪರಿಣಮಿಸಿದ್ದು ಆಕಸ್ಮಿಕ. ವೃತ್ತಿ ಬದುಕಿನ ಅಂಚಿನಲ್ಲಿ ನಿಂತಾಗ ವೈಯಕ್ತಿಕ ಜೀವನದ ಎಷ್ಟೋ ಸಂಗತಿಗಳು ಕಾಡುತ್ತಿದ್ದ ಕಾರಣ ಅವಕ್ಕೆಲ್ಲ ಅಕ್ಷರ ರೂಪ ಕೊಡುವ ದುಸ್ಸಾಹಸಕ್ಕೆ ಪ್ರೇರಣೆಯಾಯಿತು. ಇದನ್ನು ದುಸ್ಸಾಹಸ ಎಂದು ಹೇಳುವುದಕ್ಕೆ ಕಾರಣ ನನಗೂ ಸ್ಪಷ್ಟವಾಗಿ ತೋಚುತ್ತಿಲ್ಲ. ಆದರೆ, ನನ್ನ ಈವರೆಗಿನ ಯಾವ ಸಾಹಿತ್ಯ ಚಟುವಟಿಕೆಯೂ ಮುಖ್ಯವಾಹಿನಿಯಲ್ಲಿ(?) ಗಮನ ಸೆಳೆದಿಲ್ಲ. ಪತ್ರಿಕೆಯಲ್ಲಿ ಇದ್ದ ಕಾರಣಕ್ಕೆ, ಆ ಸಂದರ್ಭದಲ್ಲಿ ಸಂಪರ್ಕಕ್ಕೆ ಬಂದ, ಪತ್ರಿಕೆಯಿಂದಲೇ ಖ್ಯಾತರಾದ ಅನೇಕರು ನನ್ನ ಬರಹಗಳನ್ನು ಮೌಖಿಕವಾಗಿ ಮೆಚ್ಚಿರುವಂತೆ ತೋರಿಸಿಕೊಳ್ಳುವುದಿದೆ. ಆದರೆ ನನ್ನ ಯಾವುದೇ ಸಾಹಿತ್ಯ ಪ್ರಕಾರದ ಬಗ್ಗೆ, ಕೃತಿಯ ಬಗ್ಗೆ ವಿಮರ್ಶಕರು ತಮ್ಮ ಉಪನ್ಯಾಸಗಳಲ್ಲಾಗಲೀ, ಲೇಖನಗಳಲ್ಲಾಗಲೀ ಉಲ್ಲೇಖಿಸಿದ್ದು, ಪ್ರಸ್ತಾಪಿಸಿದ್ದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಆಪ್ತ ಮಿತ್ರ ನರಹಳ್ಳಿ ಬಾಲಸುಬ್ರಹ್ಮಣ್ಯ ನಾನು ಶ್ರೋತೃವಾಗಿ ಭಾಗವಹಿಸಿದ್ದ ಕೆಲವು ಸಭೆಗಳಲ್ಲಿ ನನ್ನ ಕಥಾಸಾಹಿತ್ಯಕ್ಕೆ ಯೋಗ್ಯ ಗೌರವ ಸಿಕ್ಕಿಲ್ಲವೆಂದು ಪ್ರಸ್ತಾಪಿಸಿದ್ದುಂಟು (ಅದಕ್ಕಾಗಿ ನಾನು ಅವರಿಗೆ ತುಂಬ ಕೃತಜ್ಞ). ನನ್ನ ಬರಹಗಳಿಗೆ ಸಂಬಂಧಿಸಿ ವಿಶ್ಲೇಷಣಾತ್ಮಕ ಲೇಖನಗಳು ತುಂಬ ಅಪರೂಪ. ಇದಕ್ಕಾಗಿಯೇ ನನ್ನ ಬರಹಗಳ ಬಗ್ಗೆ ಸಾರಸ್ವತ ಲೋಕದ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ನನ್ನ ವ್ಯಾಪ್ತಿಗೆ ಮೀರಿದ್ದೆಂದೇ ಭಾವಿಸುತ್ತೇನೆ. ಯಾವುದೇ, ಸಾಹಿತ್ಯಕ, ಸಾಂಸ್ಕೃತಿಕ ಹಿನ್ನೆಲೆ ಇಲ್ಲದ ಹಳ್ಳಿ, ಸಮುದಾಯದಿಂದ ಬಂದ ವ್ಯಕ್ತಿ ರಾಜಧಾನಿಯಲ್ಲಿ ಗೌರವಯುತ ಹುದ್ದೆ ಸಂಪಾದಿಸಿ ಸ್ವಂತ ಬದುಕನ್ನು ಕಟ್ಟಿಕೊಳ್ಳುವುದೇ ಪವಾಡಸದೃಶ ಬದಲಾವಣೆ. ಬರವಣಿಗೆ ಪ್ರಕಟವಾಗುವುದಕ್ಕೆ ಅವಕಾಶ ಸಿಕ್ಕಿರುವುದು ನಿಜಕ್ಕೂ ಪವಾಡವೇ. ಕಾಳಿದಾಸ ತನ್ನ ರಘುವಂಶ ಕಾವ್ಯಾರಂಭದಲ್ಲಿ `ಪ್ರಾಂಶು ಲಬ್ಧೇ ಫಲೇ ಲೋಭಾತ್ ಉದ್ಭಾಹುರಿವ ವಾಮನಃ' ಎಂದೇನೋ ಹೇಳಿಕೊಂಡಿದ್ದನೆಂದು ಬಿಎ (ಆನಸರ್್) ತರಗತಿಯಲ್ಲಿ ಓದಿದ್ದ ನೆನಪು. ನನ್ನ ಸಾಹಿತ್ಯಕ್ಕೆ ವಿಮರ್ಶಕರ ಮನ್ನಣೆ ಪಡೆಯುವ ನಿರೀಕ್ಷೆ ಇಟ್ಟುಕೊಳ್ಳುವುದೆಂದರೆ ಕುವೆಂಪು ಕಾದಂಬರಿಯೊಂದರಲ್ಲಿ ಉಲ್ಲೇಖವಾದ `ಅಂಬಲಿ ಕುಡಿಯೋನು ಅಂಬರಕ್ಕೆ ಹಾರೋಕೆ ಆಸೆ ಪಟ್ಟ' ಎಂಬ ಗಾದೆಯನ್ನು ನಿಜ ಮಾಡಿದಂತಾಗುತ್ತದೆ, ಅಷ್ಟೆ.
ಪತ್ರಕರ್ತನಾಗಿ ವೃತ್ತಿಯನ್ನು ನಡೆಸಿದವನು. ಅದನ್ನು ಕರ್ತವ್ಯ ಎಂದು ಭಾವಿಸಿದವನು. ವೃತ್ತಿಯ ಗೌರವ, ಸಾಮಾಜಿಕ ಹೊಣೆಗಾರಿಕೆಗಳ ಮಧ್ಯೆ ಸಮತೋಲನ ಸಾಧಿಸಲು ಕಸರತ್ತು ಪಡುತ್ತ ಇದ್ದ ಬಗ್ಗೆ ಸಮಾಧಾನ ಹೊಂದಿರುವ ನನಗೆ, ಬರವಣಿಗೆಗೆ ಸಾರಸ್ವತ ಲೋಕದ ಮಾನ್ಯತೆ ಪಡೆಯುವ ಬಗ್ಗೆ ನಿರೀಕ್ಷೆಗಳಿಲ್ಲ. ನಾನು ಆಸಕ್ತಿ ವಹಿಸಿ ಬರೆದ, ಬರೆಸಿದ ಕೆಲವು ಸಾಮಾಜಿಕ ಚಿಂತನೆಯ ವಿಶೇಷ ವರದಿಗಳಿಗೆ ಸಕರ್ಾರ ಗಮನ ಕೊಟ್ಟಿದೆ ಎಂಬ ಸಮಾಧಾನವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶತಮಾನಗಳಿಂದ ನಡೆಯುತ್ತಿದ್ದ `ಅಜಲು' ಎಂಬ ಅಮಾನವೀಯ ಆಚರಣೆಯ ಕುರಿತಾಗಿ ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿ, ಅದಕ್ಕೆ (ಆ ಆಚರಣೆಯ ಬಗ್ಗೆ) ವ್ಯಕ್ತವಾದ ಸಾರ್ವಜನಿಕ ವಿರೋಧ, ಸಕರ್ಾರ ಅಜಲು ಪದ್ಧತಿಯನ್ನು ನಿಷೇಧಿಸುವುದಕ್ಕೆ ಕಾರಣವಾಯಿತು. ಬಸವರಾಜ ಸಂಪಳ್ಳಿ ಎಂಬ ಕಿರಿಯ ಸಹೋದ್ಯೋಗಿಗೆ ಧೈರ್ಯ ತುಂಬಿ ಹೇಳಿ ಬರೆಸಿದ ಮಡೆಮಡೆಸ್ನಾನ ಕುರಿತಾದ ಸಾಂದಭರ್ಿಕ ಲೇಖನ, ಆ ಪದ್ಧತಿಯ ಬಗ್ಗೆ ವ್ಯಾಪಕ ಚಚರ್ೆಗೆ ನೆಪವಾಯಿತು. ರಾಜ್ಯದಾದ್ಯಂತ ಪ್ರಗತಿಪರ ಸಂಘಟನೆಗಳು ಎಂಜಲು ಎಲೆಯ ಮೇಲೆ ಉರುಳು ಸೇವೆ ಮಾಡುವ ಮಡೆಸ್ನಾನದ ನಿಷೇಧಕ್ಕೆ ಸಕರ್ಾರವನ್ನು ಒತ್ತಾಯಿಸಿದವು. ಒಂದು ಪತ್ರಿಕಾ ವರದಿ ಸಾಮಾಜಿಕ ಜಾಗೃತಿಗೆ ನೆರವಾಗುತ್ತದೆ. ಆ ಪ್ರಕ್ರಿಯೆಯಲ್ಲಿ ಒಂದು ಸಣ್ಣ ಪಾತ್ರ ವಹಿಸಿದ ತೃಪ್ತಿ ಪತ್ರಿಕೆಯಲ್ಲಿನ ಎಲ್ಲ ಉದ್ಯೋಗಿಗಳಿಗೂ ಸಿಗುತ್ತದೆ. ಅಂಥ ತೃಪ್ತಿಯನ್ನು ಆಗಾಗ ಪಡೆದ ಧನ್ಯತೆ ನನ್ನದು.
ತಮ್ಮ ಬರಹಗಳ ಮೂಲಕ ನನ್ನಂಥವರಲ್ಲಿ ಸ್ವತಂತ್ರ ವಿಚಾರಧಾರೆಯನ್ನು ಮೂಡಿಸಿದವರು ಕುವೆಂಪು. ವಿದ್ಯಾಥರ್ಿದೆಸೆಯಲ್ಲಿ ಅವರನ್ನು ಎರಡು ಸಲ ನಿಕಟವಾಗಿ ಭೇಟಿ ಮಾಡಿದ ಅನುಭವ ನನ್ನ ಮೇಲೆ ಬೀರಿದ ಪ್ರಭಾವ ಅಪಾರ. ಬೆಂಗಳೂರಿನಲ್ಲಿ ನನ್ನ ಬಿ.ಎ (ಆನಸರ್್) ಪದವಿ ಪ್ರದಾನ ಘಟಿಕೋತ್ಸವ ಭಾಷಣವನ್ನು ಕುವೆಂಪು ಅವರೇ ಮಾಡಿದ್ದರು. ಅದೊಂದು ಐತಿಹಾಸಿಕ ಸಮಾವೇಶ. ಘಟಿಕೋತ್ಸವಕ್ಕೆ ಬಂದಿದ್ದವರು ಮರುದಿನವೇ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರೂ ಭಾಗಿಯಾಗಿದ್ದ ಆ ಸಮಾರಂಭದಲ್ಲಿ ಕುವೆಂಪು ಅವರ ಉಪಸ್ಥಿತಿಯೇ ತುಂಬ ಪರಿಣಾಮಕಾರಿಯಾಗಿತ್ತು. ಕುವೆಂಪು ಸಾಹಿತ್ಯವಂತೂ ಬಾಲ್ಯದಿಂದಲೇ ಪರಿಚಿತವಾದದ್ದು. ಅದು ನನ್ನ ಬದುಕಿನ ಗುರಿಯನ್ನು ನಿದರ್ೇಶಿಸುವಷ್ಟು ಪ್ರಭಾವ ಬೀರಿದೆ. ನನ್ನ ಚಿಂತನೆಯನ್ನು ಪ್ರಭಾವಿಸಿದೆ. ಸಮಾಜದ ಕೆಳವರ್ಗದ ವ್ಯಕ್ತಿಗಳಿಗೆ ಸಾಹಿತ್ಯದಲ್ಲಿ ಸ್ಥಾನ ನೀಡಿದ ಕುವೆಂಪು ಸಾಮಾನ್ಯ ವ್ಯಕ್ತಿಯನ್ನು ಶ್ರೀಸಾಮಾನ್ಯ ಎಂದು ಕರೆದು ಗೌರವಿಸಿದವರು. ವಿದ್ಯಾಥರ್ಿಯನ್ನು ಗೌರವ ತಪಸ್ವಿ ಎಂದು ಬಣ್ಣಿಸಿ ಕಲಿಕೆಯ ಪ್ರಕ್ರಿಯೆ ತಪಸ್ಸಿಗೆ ಕಡಿಮೆಯಾದದ್ದಲ್ಲ ಎಂದು ಗುರುತ್ವವನ್ನು ನೀಡಿದವರು. ವರ್ಷಗಳು ಕಳೆದಂತೆ ಅವರ ಸಾಹಿತ್ಯ ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿದೆ ಎಂಬುದು ನನ್ನ ಅನಿಸಿಕೆ.
`ಇವರ ಕಾಟ ಅತಿಯಾಯ್ತು..'
ಊರಿನಲ್ಲಿ ನಮ್ಮದು ಹುಲ್ಲಿನ ಮನೆ. ಮಣ್ಣಿನ ಗೋಡೆ ಇದ್ದುದು ಅದಕ್ಕೊಂದು ಭದ್ರತೆ ನೀಡಿತ್ತು. ಸಣ್ಣದೊಂದು ಅಂಗಿ, ಚಡ್ಡಿ ಹಾಕಿಕೊಂಡು ಮನೆಯಲ್ಲಿದ್ದಾಗ ಅಕ್ಕಮ್ಮ (ನನ್ನ ಎರಡನೇ ಅಕ್ಕ, ಜಾನಕಮ್ಮ) ನೆರೆಮನೆಯ ಹುಡುಗಿಯರೊಂದಿಗೆ ಮನೆಯಿಂದ ಮೂರು ಕಿಲೋಮೀಟರ್ ದೂರದ ಕಣಬಂದೂರು ಶಾಲೆಗೆ ಹೋಗಿ ಬರುತ್ತಿದ್ದಳು. ಮನೆಯ ಸುತ್ತಮುತ್ತ ತಿರುಗಾಡುತ್ತ ಬೇಕುಬೇಕಾದ ಆಟ ಆಡಿಕೊಂಡಿದ್ದವನಿಗೆ ಒಂದು ಮಧ್ಯಾಹ್ನ, ಕೊಟ್ಟಿಗೆಯ ಬಳಿ ತಮ್ಮನ ಜೊತೆಗೆ ಜಗಳವಾಗಿ ಅದು ವಿಕೋಪಕ್ಕೆ ಹೋಯಿತು. ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವನಾಗಿದ್ದರೂ ಆಳುತನದಲ್ಲಿ ಅವನಿಗಿಂತ ಪೀಚೇ ಆಗಿದ್ದ ನನ್ನ ಮೇಲೆ ತಮ್ಮ ತನ್ನ ಪುಟ್ಟ ಕೈಗಳಿಂದ ಹಲ್ಲೆ ನಡೆಸಿ ಮುಖ ಪರಚಿದ್ದ. ಕೆನ್ನೆಯ ಬಳಿ ಉಗುರು ತಾಗಿ ಸಣ್ಣದೊಂದು ಬರೆ ಹಾಕಿದಂತೆ ಗಾಯವೂ ಆಗಿತ್ತು. ಸಣ್ಣಗೆ ರಕ್ತ ಜಿನುಗಿರಬೇಕು. ನೋವು ಮತ್ತು ತಮ್ಮನಿಂದ ಪರಚಿಸಿಕೊಂಡ ಅಪಮಾನದಿಂದ ಅವನನ್ನು ಅಟ್ಟಿಸಿಕೊಂಡು ಮನೆಯ ಅಂಗಳಕ್ಕೆ ಬಂದಾಗ ಚುರುಕಾಗಿದ್ದ ತಮ್ಮ, `ಅವ್ವಾ, ಇವನು ಹೊಡೀತಾನೆ' ಎಂದು ಆರ್ತನಾದ ಮಾಡುತ್ತ ಅಂಗಳದಿಂದ ಜಗುಲಿ ಹತ್ತಿ ಒಳಮನೆಗೆ ನುಗ್ಗಿ ಅಡುಗೆಮನೆಯಲ್ಲಿದ್ದ ಅವ್ವನ ಸೀರೆ ನೆರಿಗೆಯಲ್ಲಿ ಅಡಗಿಕೊಂಡ. ಮುಖದಲ್ಲಿ ಪರಚಿ ಗಾಯ ಮಾಡಿದ್ದ ತಮ್ಮನ ವಿರುದ್ಧ ಸಾಕ್ಷ್ಯ ಸಮೇತ ವರದಿ ನೀಡಿ ಶಿಕ್ಷೆ ಕೊಡಿಸಬೇಕು ಎಂದು ಅಳುತ್ತಾ ಬೆನ್ನತ್ತಿದವನು ನಡುಮನೆಯಿಂದ ಹೊರಬರುತ್ತಿದ್ದ ಅಪ್ಪನ ಕಾಲಿಗೆ ಡಿಕ್ಕಿ ಹೊಡೆದು ನಿಂತುಬಿಟ್ಟೆ.
`ಈ ಹುಡುಗರ ಕಾಟ ಜಾಸ್ತಿಯಾಯ್ತು..' ಎಂದು ಅಸಹನೆ ವ್ಯಕ್ತಪಡಿಸಿದ ಅಪ್ಪ `ನಿಲ್ಲೋ ಅಲ್ಲಿ, ಯಾಕೋ ಅವನ್ನ ಬೆನ್ನಟ್ಟಿ ಹೊಡಿತೀಯಾ' ಎಂದು ಹಠಾತ್ತಾಗಿ ಬಂದ ಕೋಪದಿಂದ ರಟ್ಟೆ ಹಿಡಿದು ನಿಲ್ಲಿಸಿದ. ಮುಖದಲ್ಲಿ ರಕ್ತ ಜಿನುಗುತ್ತಿರುವುದನ್ನು ನೋಡಿದರೆ ಅದಕ್ಕೆ ಕಾರಣನಾದ ತಮ್ಮನನ್ನು ಹಿಡಿದು ಹೊಡೆಯುತ್ತಾನೆ ಎಂದು ನಿರೀಕ್ಷಿಸಿ `ಅವನು ಹೊಡೆದ..' ಎಂದು ತಮ್ಮನತ್ತ ಕೈ ತೋರಿಸಿ ಅಳುತ್ತಳುತ್ತಲೇ ಹೇಳಿದೆ. ಯಾವ ಚಿಂತೆಯಲ್ಲಿದ್ದನೋ ಅಪ್ಪ, `ನಿಮಗೆ, ತಿಂದ ಸೊಕ್ಕು.. ದೊಡ್ಡ ಕತ್ತೆಯಾಗಿದ್ದೀಯಾ, ನಿಮ್ಮನ್ನ ಹೀಗೆ ಬಿಟ್ರೆ ಹಾಳಾಗಿ ಹೋಗ್ತೀರಿ..' ಎಂದು, ಮೊದಲೇ ಅಳುತ್ತಿದ್ದ ನನ್ನ ರೆಟ್ಟೆಯನ್ನು ಎಡಗೈಯಲ್ಲಿ ಎತ್ತಿ ಹಿಡಿದು ಬಲಗೈಯಿಂದ ಪೃಷ್ಟದ ಮೇಲೆ ರಪ್ಪರಪ್ಪನೆ ಬಾರಿಸಿದ. ಚುರುಕಾಗಿದ್ದ ಪೆಟ್ಟಿನ ಏಟಿಗೆ ಇನ್ನಷ್ಟು ನೋವಾಯಿತಾದರೂ ಜೋರಾಗಿ ಅತ್ತರೆ ಮತ್ತಷ್ಟು ಪೆಟ್ಟು ಬೀಳುವ ಭಯದಿಂದ ಬಾಯಿ ಅದುಮಿಕೊಂಡು ಸುಮ್ಮನಾದೆ. ಉಸಿರು ತಡೆಹಿಡಿದ ಕಾರಣ ಬಿಕ್ಕಳಿಸುವಂತಾಯಿತು.
`ಇವರ ಕಾಟ ಅತಿಯಾಯ್ತು..' ಎಂದು ಹೇಳುತ್ತ `ಏಯ್, ಇವನ ಮುಖ ತೊಳೆದು ಬಟ್ಟೆ ಹಾಕಿ ಕಳಿಸು' ಎಂದು ಒಳಗಡೆ ಆಜ್ಞಾಪಿಸಿದ ಅಪ್ಪ. ಅವನು ಅವ್ವನನ್ನು ಕರೆಯುತ್ತಿದ್ದುದೇ ಹಾಗೆ. ನಾನು ಅಷ್ಟಕ್ಕೆ ಸಮಾಧಾನಗೊಂಡು ಅವ್ವನನ್ನು ಅರಸಿ ಅಡುಗೆ ಮನೆ ಪ್ರವೇಶಿಸಿದೆ. ಕತ್ತಲು ತುಂಬಿದ ಅಡುಗೆ ಮನೆ. ಅಪ್ಪನ ಆಣತಿಯಂತೆ ಅವ್ವ ಒಳಗೆ ಬಂದಿದ್ದ ನನ್ನನ್ನು ಹಿಡಿದು ಹಿತ್ತಲು ಕಡೆ ಬಾಗಿಲ ಬಳಿ ಕರೆದೊಯ್ದು ತಣ್ಣೀರಿನಿಂದ ಮುಖ ತೊಳೆದಳು. ಆಗಷ್ಟೆ ಉಗುರಿನ ಗಾಯವಾಗಿದ್ದರಿಂದ ನೋವು ಮತ್ತಷ್ಟು ಜೋರಾಗಿ ತಡೆದುಕೊಳ್ಳಲಾಗದೆ ಕಿರುಚಿದೆ. `ಏನಂತೆ ಅವನಿಗೆ, ಯಾಕೆ ಹಂಗೆ ಒರಲ್ತಾನೆ' ಎಂದು ಅಪ್ಪ ಜಗುಲಿಯಿಂದಲೇ ಗುಡುಗಿದಾಗ ಮತ್ತೆ ಉಸಿರು ಹಿಡಿದುಕೊಂಡೆ. ಕೆನ್ನೆಯ ಗಾಯದ ಉರಿ ಮತ್ತಷ್ಟು ಜಾಸ್ತಿಯಾದರೂ ಕೂಗಿಕೊಳ್ಳುವಂತೆ ಇರಲಿಲ್ಲ.
ಆಗಿನ್ನೂ ಅಂಗನವಾಡಿ, ಬಾಲವಾಡಿಗಳ ಪರಿಕಲ್ಪನೆ ಹಳ್ಳಿಗಳಿಗೆ ಕಾಲಿಟ್ಟಿರಲಿಲ್ಲ. ಊರಲ್ಲಿ ಶಾಲೆ ಇಲ್ಲದಿದ್ದರೆ ಹತ್ತಿರದ ಊರಿನಲ್ಲಿ ಇರುವ ಶಾಲೆಗೆ ಸೇರಿಸಬೇಕು ಎಂಬ ಭಾವನೆ ಮನೆ ಹಿರಿಯರಿಗೆ ಬರಬೇಕೆಂದರೆ ಮನೆಯಲ್ಲಿನ ಸಣ್ಣ ಮಕ್ಕಳ ಉಪಟಳ ಮೇರೆ ಮೀರಿ ಅವರ ಗಮನ ಸೆಳೆಯಬೇಕಿತ್ತು. ಮೂರು ವರ್ಷ ತುಂಬುವುದರಲ್ಲಿ ಮಾತಾಡುವುದನ್ನು ಕಲಿತಿರುತ್ತಿದ್ದ ಮಕ್ಕಳು ಮನೆಯ ಸುತ್ತಲಿನ ಗದ್ದೆ, ಹಕ್ಕಲಿನ ಕಲ್ಲು ಮಣ್ಣಿನಲ್ಲಿ ಉರುಳುತ್ತ ಹೊರಳಾಡುತ್ತ, ಕೆಸರಿನಲ್ಲಿ ಬೀಳುತ್ತ ಏಳುತ್ತ, ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಂಡು ಮನೆಯಲ್ಲಿದ್ದ ಮಹಿಳೆಯರಿಗೆ ಕಾಟ ಕೊಡುತ್ತ ಕಳೆಯುತ್ತಿದ್ದ ದಿನಗಳು. ನಮ್ಮದು ರೈತ ಕುಟುಂಬ. ಹಳ್ಳಿಯಲ್ಲಿ ಬೇಸಾಯ ಬಿಟ್ಟರೆ ಬೇರೆ ಕಸುಬು ಗೊತ್ತಿರಲಿಲ್ಲ. ಅವರ ಯಾವತ್ತೂ ಮಾತುಕತೆಗಳು ಬೇಸಾಯ, ಬೆಳೆ ರಕ್ಷಣೆ, ಕುಸಿದ ಧಾರಣೆ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಿದ್ದವು. ಅಪ್ಪ, ಅಣ್ಣಂದಿರು ಕೃಷಿಯ ಕೆಲಸಗಳಿಗಾಗಿ ಬೆಳಗ್ಗೆ ಹೊರಟು ಮಧ್ಯಾಹ್ನ ಊಟಕ್ಕೆ ವಾಪಸಾಗುವವರೆಗೆ ಮನೆಯಲ್ಲಿ ಮಕ್ಕಳದೇ ಸಾಮ್ರಾಜ್ಯ. ಮನೆ ಸುತ್ತಮುತ್ತ ಓಡಾಡಲು ಆರಂಭಿಸಿದ ಮೇಲೆ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲು ಮನೆಯ ಹೆಂಗಸರಿಗೂ ಆಗುತ್ತಿರಲಿಲ್ಲ. ಬೆಳಿಗ್ಗೆ ಹೊಟ್ಟೆಗೆ ಹಾಕಿದರೆ ಮತ್ತೆ ಹಸಿವಾದಾಗ ಅಡುಗೆ ಮನೆಗೇ ಬಂದು ಊಟಕ್ಕೆ ಒತ್ತಾಯಿಸುತ್ತಿದ್ದರಿಂದ ಮೂರು- ನಾಲ್ಕು ವರ್ಷದ ಮಕ್ಕಳಿಗಾಗಿ ಹೆಚ್ಚಿನ ಗಮನ ಕೊಡಲಾಗುತ್ತಿರಲಿಲ್ಲ. ಆಟ, ಮನೆ ಬದಿ ತಿರುಗಾಟದಲ್ಲಿ ಮುಳುಗಿರುತ್ತಿದ್ದ ಮಕ್ಕಳು ತಮ್ಮತಮ್ಮಲ್ಲಿ ಹೊಡೆದಾಡಿ ಗಾಯ ಮಾಡಿಕೊಂಡು ದೂರು ತಂದಲ್ಲಿ, `ಇವರ ಉಪಟಳ ಜಾಸ್ತಿಯಾಯಿತು, ಇಸ್ಗೂಲಿಗೆ ಹಾಕಬೇಕು' ಎಂಬ ಉದ್ಗಾರ ಬರುತ್ತಿತ್ತು.
ಐದು ವರ್ಷ ತುಂಬಿದ್ದ ನನಗೆ, `ಇವನಿಗೆ ಮೇಷ್ಟರಿಂದ ಎರಡು ಬೀಳಬೇಕು' ಎಂದು ಆ ಕ್ಷಣವೇ ತೀಮರ್ಾನಿಸಿದ ಅಪ್ಪ, ಗದ್ದೆ ಸಾಲಿನ ಕಾಲುಹಾದಿಯಲ್ಲಿ ಕೋಡಿಕೊಪ್ಪದ ಶಾಲೆಗೆ ಕರೆತಂದ (ಆ ಹಳ್ಳಿಗೆ ಕಣಬಂದೂರು ಎಂಬ ಇನ್ನೊಂದು ಹೆಸರೂ ಇತ್ತು. ಅದೇ ಈಗ ಚಾಲ್ತಿಯಲ್ಲಿದೆ). ನಾಲ್ಕನೇ ತರಗತಿಯ ಹುಡುಗರನ್ನು ಆಟಕ್ಕೆ ಬಿಟ್ಟು ಮೂರನೇ ತರಗತಿಯ ಮಕ್ಕಳಿಗೆ ಏನೋ ಪಾಠ ಹೇಳುತ್ತಿದ್ದ ಗಿರಿಯಪ್ಪ ಮೇಷ್ಟರು, ಅಪ್ಪ ನನ್ನನ್ನು ತಳ್ಳಿಕೊಂಡು ಒಳಗೆ ಪ್ರವೇಶಿಸಿದಾಗ ಪಾಠ ನಿಲ್ಲಿಸಿ ವಿಚಾರಿಸಿದರು. `ಇಸ್ಗೂಲಿಗೆ ಸೇರಿಸಲು ಬಂದಿದ್ದಾಗಿ' ಅಪ್ಪ ಹೇಳಿದಾಗ ಅವರು ಪುಸ್ತಕವೊಂದನ್ನು ತೆರೆದು ಏನನ್ನೋ ಬರೆದುಕೊಂಡರು. ಹುಟ್ಟಿದ ತಾರೀಕು ಕೇಳಿದಾಗ ಅಪ್ಪ ಯಾವುದೋ ಘಟನೆಯನ್ನು ಪ್ರಸ್ತಾಪಿಸಿ `ಯುಗಾದಿ ಕಳೆದು ಮೂರು ದಿನ ಆಗಿತ್ತು ಇವನು ಹುಟ್ಟಿದಾಗ' ಎಂದು ನಿಖರವಾದ `ಸಾಕ್ಷ್ಯ' ಒದಗಿಸಿದ. ಆಗ ಜನನ ದಾಖಲೆ ಕಡ್ಡಾಯವಾಗಿರಲಿಲ್ಲವೆಂದು ತೋರುತ್ತದೆ. ತಮಗೆ ಕಂಡಂತೆ ಲೆಕ್ಕ ಹಾಕಿದ ಗಿರಿಯಪ್ಪ ಮೇಷ್ಟರು ಒಂದನೇ ತರಗತಿಯ ಹಾಜರಿ ಪುಸ್ತಕದಲ್ಲಿ ಹೆಸರು ಬರೆದು ಅದನ್ನು ಕೂಗಿದರು. ಅದಕ್ಕೆ ಎದ್ದು ನಿಂತು `ಪ್ರಜೆಂಟ್ ಸಾರ್' ಎಂದು ಪ್ರತಿಯಾಗಿ ಹೇಳಬೇಕೆಂದೂ ಹೇಳಿಕೊಟ್ಟರು. ಹೀಗೆ ಮಧ್ಯಾಹ್ನದ ಊಟದ ಬಿಡುವಿನ ನಂತರ, ಬಹುಮಟ್ಟಿಗೆ ಶಾಲೆ ಬಿಡುವ ಸಮಯದಲ್ಲಿ ನಾನು ಶಾಲೆಗೆ ಸೇರಿಕೊಂಡೆ.
ಮನೆಯಿಂದ ಕಣಬಂದೂರು ಶಾಲೆಗೆ ಹೋಗಿ ಬರುತ್ತಿದ್ದಾಗ ಜೊತೆಗೆ ನನ್ನ ಎರಡನೇ ಅಕ್ಕ ಇದ್ದಳೆ. ಅವಳಿಗೆ ನಾವು ಅಕ್ಕಮ್ಮ ಎಂದು ಕರೆಯುತ್ತಿದ್ದೆವು. ಅವಳು ಮೂರನೇ ತರಗತಿಯಲ್ಲಿದ್ದಳು. ಗದ್ದೆಯ ಸಾಲಿನಲ್ಲಿ ನಡೆದುಕೊಂಡು ಹೋಗಿ ವಾಪಸು ಬರುತ್ತಿದ್ದೆವು. ಬೇಸಿಗೆಯಲ್ಲಿ ಅದು ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಮಳೆಗಾಲ ಮತ್ತು ಚಳಿಗಾಲದಲ್ಲಿ ಗದ್ದೆಯ ಕೋಗಿನಲ್ಲಿ ಸಾಗುವುದು ಸುಲಭವಿರಲಿಲ್ಲ. ಮಧ್ಯೆ ಸಣ್ಣಮಟ್ಟದ ನಾಲ್ಕು ಹಳ್ಳಗಳನ್ನು ದಾಟಬೇಕಿತ್ತು. ಹಳ್ಳ ದಾಟಲು ಮರದ ಕೊರಡುಗಳ ಸಾರವನ್ನು (ಸಂಕ) ಹಾಕಿರುತ್ತಿದ್ದರಾದರೂ ಜೋರು ಮಳೆಯಾಗಿ ಹಳ್ಳದ ನೀರು ರಭಸವಾಗಿ ಹರಿಯುತ್ತಿದ್ದಾಗ ತುಂಬ ಭಯವಾಗುತ್ತಿತ್ತು. ಅದೊಂದು ಶನಿವಾರ. ಅರ್ಧ ದಿನದ ಶಾಲೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದೆವು. ನಿತ್ಯದಂತೆ ಗದ್ದೆಯ ಮಧ್ಯೆ ಇದ್ದ ಹಳ್ಳವನ್ನು ದಾಟಬೇಕಿತ್ತು. ಅಲ್ಲಿ ಹಳ್ಳದಾಟಲು ಒಂದು ಮರದ ಕೊರಡನ್ನು ಹಾಕಿದ್ದರು. ಹಳ್ಳದಲ್ಲಿ ನೀರು ಜೋರಾಗಿ ಹರಿಯುತ್ತಿತ್ತು. ಅಕ್ಕಮ್ಮ ಮುಂದೆ ಸಾಗಿದಳು. ನನ್ನ ಹಿಂದೆ ನಮ್ಮೂರಿನ ಶ್ರೀಧರಣ್ಣ ಬರುತ್ತಿದ್ದ. ಅವನು ಪೇಟೆಯ ಮಾಧ್ಯಮಿಕ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದವನು. ಅವನು ಒಳದಾರಿಯಲ್ಲಿ ಬಂದು ನಮ್ಮನ್ನು ಸೇರಿಕೊಂಡಿದ್ದ. ಪೇಟೆಯ ಶಾಲೆಯಲ್ಲಿ ಓದುತ್ತಿದ್ದ ಅವನು ನಮಗೆ ತುಂಬ ದೊಡ್ಡವನಂತೆ ಕಾಣುತ್ತಿದ್ದ. ಅವನೊಟ್ಟಿಗೆ ಏನೇನೋ ಗಳಹುತ್ತಿದ್ದ ನಾನು, ಅಕ್ಕಮ್ಮ ಸಾರ ದಾಟಿದ ಮೇಲೆ ನಿಧಾನವಾಗಿ ಹಿಂಬಾಲಿಸಿದೆ. ಎರಡನೇ ಹೆಜ್ಜೆಗೆ ಕಾಲು ಜಾರಿ ಕೆಳಕ್ಕೆ ಹಳ್ಳಕ್ಕೆ ಬಿದ್ದೆ. ನಾಲ್ಕು ಅಡಿಯಷ್ಟು ಆಳದ ಹಳ್ಳದ ನೀರು ರಭಸವಾಗಿ ನುಗ್ಗುತ್ತಿದ್ದ ಕಾರಣ ಅದರಲ್ಲಿ ನಿಲ್ಲಲಾಗದೆ ಮುಗ್ಗರಿಸಿದೆ. ಕಲ್ಲು, ಕೊರಕಲು ಇದ್ದ ಹಳ್ಳದ ನೀರಿನಲ್ಲಿ ತೇಲಿಹೋದೆ. ಅದನ್ನು ಕಂಡು ಏನನ್ನೂ ಹೇಳಲಾಗದ ದಿಕ್ಕೆಟ್ಟ ಸ್ಥಿತಿಯಲ್ಲಿ ಅಕ್ಕಮ್ಮನಿದ್ದರೆ ನಮ್ಮಿಬ್ಬರಿಗಿಂತ ಒಂದೆರಡು ವರ್ಷ ದೊಡ್ಡವನಾಗಿದ್ದ ಶ್ರೀಧರಣ್ಣ ತಕ್ಷಣವೇ ಕೆಳಕ್ಕೆ ಧುಮುಕಿ ಹಳ್ಳದ ದಂಡೆಯಲ್ಲಿ ಜೋರಾಗಿ ಓಡಿ ಮುಂದೆ ಬಂದು ಅಡ್ಡ ನಿಂತು ನನ್ನನ್ನು ಹಿಡಿದು ನಿಲ್ಲಿಸಿದ. ನೀರಿಗೆ ಬಿದ್ದ ಗಾಬರಿಯಿಂದ ಅಳಲೂ ಆಗದಷ್ಟು ಆಘಾತದ ಸ್ಥಿತಿಯಲ್ಲಿದ್ದ ನನ್ನ ಬೆನ್ನ ಮೇಲೊಂದು ಗುದ್ದು ಕೊಟ್ಟ. ಹಾಗೆ ಮಾಡಿದರೆ ನೀರಿಗೆ ಬಿದ್ದಾಗ ಯಾವುದಾದರೂ ದೆವ್ವಗಳು ಅಮರಿಕೊಂಡಿದ್ದರೆ ಬಿಟ್ಟು ಹೋಗುತ್ತವೆ ಎಂದು ಯಾರೋ ಹೇಳಿದ್ದರಂತೆ. ನಾನು ಮುಗ್ಗರಿಸಿ ಬಿದ್ದಿದ್ದೆನಾದರೂ ನೀರನ್ನು ಕುಡಿದಿರಲಿಲ್ಲ. ಆದ್ದರಿಂದ ಆಘಾತವಷ್ಟೆ ಆಗಿತ್ತು. ಭಯದಿಂದ ಸಣ್ಣಗೆ ನಡುಕವೂ ಇತ್ತು. ಅಕ್ಕಮ್ಮ ಅಳುತ್ತಳುತ್ತಲೇ ಸಂತೈಸುತ್ತ ನನ್ನನ್ನು ನಿಧಾನವಾಗಿ ಮನೆಗೆ ಕರೆದೊಯ್ದಳು. ಅವತ್ತು ಶ್ರೀಧರಣ್ಣ ಜೊತೆಗೆ ಬರದೇ ಇದ್ದಿದ್ದರೆ...?
ಮಳೆಗಾಲ ಕಳೆದು ಚಳಿಗಾಲ ಆರಂಭವಾದಾಗ ನಮ್ಮೂರಲ್ಲಿ ಗದ್ದೆ ಕೊಯ್ಲು. ಕೊಯ್ಲು ಮುಗಿದ ಮೇಲೆ ಗದ್ದೆಗಳಲ್ಲಿ ಕೂಳೆಯ ಹುಲ್ಲು. ಚಪ್ಪಲಿ ಇಲ್ಲದೆ ನಡೆದಾಡುವಾಗ ಚುಚ್ಚುತ್ತಿದ್ದರೂ ಅದೆಲ್ಲ ಅಭ್ಯಾಸವಾಗಿತ್ತು. ಚಪ್ಪಲಿಗಳಿಲ್ಲ ಎಂಬ ಭಾವನೆಯೂ ಬರುತ್ತಿರಲಿಲ್ಲ. ಒಂದು ಶನಿವಾರ ಒಪ್ಪೊತ್ತಿನ ಶಾಲೆ ಮುಗಿಸಿ ವಾಪಸು ಬರುವಾಗ ಗದ್ದೆ ಮಧ್ಯೆ ಜೊತೆ ಇದ್ದವರಲ್ಲಿ ಏನೋ ಭಿನ್ನಾಭಿಪ್ರಾಯ ತಲೆದೋರಿ ಅದನ್ನು ತಕ್ಷಣವೇ ಇತ್ಯರ್ಥ ಮಾಡಲು ನಮ್ಮೂರಿನ ಹುಡುಗನೊಬ್ಬ ನನ್ನನ್ನು ಅಟ್ಟಿಸಿಕೊಂಡು ಬಂದ. ಅವನಿಂದ ತಪ್ಪಿಸಿಕೊಳ್ಳಲು ಗದ್ದೆ ಇಳಿದು ಬಯಲಲ್ಲಿ ಓಡತೊಡಗಿದೆ. ಒಂದು ಗದ್ದೆಯನ್ನು ದಾಟಿ ಇನ್ನೊಂದು ಗದ್ದೆಯ ಅಂಚನ್ನು ಹಾದು ಮುಂದೆ ಒಂದೆರಡು ಹೆಜ್ಜೆ ಹಾಕುತ್ತಿದ್ದಂತೆ ಕಾಲಿಗೆ ಮೆತ್ತನೆಯ ವಸ್ತುವೊಂದು ತೊಡರಿದಂತಾಯಿತು. ಹಗ್ಗದಂತೆ ತೊಡರಿಕೊಂಡಿದ್ದ ಅದು ನಯವಾಗಿ ಜಾರಿದ್ದರಿಂದ ಮುಗ್ಗರಿಸಿ ಬೀಳಲಿಲ್ಲ. ಅದು ಮೆತ್ತಗೆ ಇದ್ದುದಕ್ಕಿಂತ ತಣ್ಣಗೆ ಇದ್ದುದು ನನ್ನ ಅನುಭವಕ್ಕೆ ಬಂತು. ತಪ್ಪಿಸಿಕೊಳ್ಳುವ ಏಕೈಕ ಉದ್ದೇಶದಿಂದ ಓಡುತ್ತಿದ್ದ ನನಗೆ, ಜತೆ ಇದ್ದ ಹುಡುಗರು `ಹಾವು ಹಾವು' ಎಂದು ಕೂಗಿದಾಗಲೇ ಓಡುವ ರಭಸಕ್ಕೆ ಭೀತಿಯೂ ಸೇರಿಕೊಂಡಿತು. ನನ್ನನ್ನು ಬೆನ್ನಟ್ಟಿದ್ದ ಹುಡುಗನೂ ತಪ್ಪಿಸಿಕೊಳ್ಳುವತ್ತ ಗಮನ ಹರಿಸಿ ಸುರಕ್ಷಿತ ಜಾಗಕ್ಕೆ ಧಾವಿಸಿದ. ಹಿಂದೆಲ್ಲೋ ಬರುತ್ತಿದ್ದ ಅಕ್ಕಮ್ಮನೂ ಗಾಬರಿಯಿಂದ ಓಡಿ ನನ್ನ ಬಳಿ ಬಂದಳು. ಅಷ್ಟು ಹೊತ್ತಿಗೆ ಹಾವಿನ ಮೇಲೆ ಕಾಲು ಇಟ್ಟು ಅದನ್ನು ರೊಚ್ಚಿಗೆ ಎಬ್ಬಿಸಿದ ಭಾವಕ್ಕೆ ಒಳಗಾಗಿದ್ದ ನಾನು ಗದ್ದೆಯ ಅಂಚಿಗೆ ಬಂದು ಕಾಲಿಗೆ ತೊಡರಿಕೊಂಡಿದ್ದ ಹಾವು ಯಾವ ಕಡೆ ಹೋಯಿತೆಂಬುದನ್ನು ನೋಡುತ್ತಿದ್ದೆ. ನನ್ನನ್ನು ಅಟ್ಟಿಸಿಕೊಂಡು ಬಂದಿದ್ದ ಹುಡುಗನಿಗೂ ಗಾಬರಿ ಆಗಿತ್ತು. ಅವನು ಹಾವಿನ ಬಣ್ಣವನ್ನು ನೋಡಿದ್ದಲ್ಲದೆ, ಅದು ಕೂಡ ಗಾಬರಿಯಿಂದ ವೇಗವಾಗಿ ಧಾವಿಸಿ ಗದ್ದೆಯ ಇನ್ನೊಂದು ಅಂಚನ್ನು ಸೇರಿ ಮರೆಯಾಯಿತು ಎಂಬ ವರದಿ ಕೊಟ್ಟ. ಅಕ್ಕಮ್ಮ ಹತ್ತಿರ ಬಂದವಳು `ಎಲ್ಲಾದರೂ ಕಚ್ಚಿತೇನೋ' ಎಂದು ಎರಡೂ ಕಾಲುಗಳ ಪರೀಕ್ಷೆ ನಡೆಸಿದಳು. ಮೂರನೆಯ ತರಗತಿಯಲ್ಲಿದ್ದ ಅವಳಿಗೆ ನಾಗರ ಹಾವಾಗಿದ್ದರೆ ಬಾಯಲ್ಲಿ ಕಚ್ಚಿ ವಿಷ ಬಿಡುತ್ತದೆ, ಕೇರೆ ಹಾವಾದರೆ, ಅದಕ್ಕೆ ಬಾಲದಲ್ಲಿ ಮುಳ್ಳು ಇರುತ್ತದೆ, ಅದರಿಂದ ವಿಷ ಬಿಡುತ್ತದೆ ಎಂಬಷ್ಟು ತಿಳಿವಳಿಕೆ ಇತ್ತು. ನನಗೆ ಎಲ್ಲಿಯೂ ಗಾಯ ಆಗಿರಲಿಲ್ಲವಾದ್ದರಿಂದ ಸದ್ಯಕ್ಕೆ ಅಪಾಯವಾಗಲಿಲ್ಲ. ಆದರೆ ಹಾವು ಹನ್ನೆರಡು ವರ್ಷ ಸೇಡು ಇಡುತ್ತದೆಯಾದ್ದರಿಂದ ಇನ್ನೊಮ್ಮೆ ಹಾದಿಯಲ್ಲಿ ಕಾದು ಕಚ್ಚಬಹುದು ಎಂದು ಯೋಚಿಸಿ ಅದನ್ನೇ ನನಗೆ ಹೇಳಿದಳು. ನನ್ನನ್ನು ಅಟ್ಟಿಸಿಕೊಂಡು ಬಂದಿದ್ದ ಹುಡುಗನೂ ನನಗೆ ದೊಡ್ಡ ಕಂಟಕವೊಂದು ಸ್ವಲ್ಪದರಲ್ಲಿ ತಪ್ಪಿತೆಂದೂ ಹಾವಿನ ದ್ವೇಷಕ್ಕೆ ಗುರಿಯಾಗದಂತಿರಲು ಇನ್ನು ಮುಂದೆ ನಾನು ಆ ಮಾರ್ಗದಲ್ಲಿ ಸುಳಿಯಬಾರದು ಎಂದೂ ಹೇಳಿದ. ಹಾವಿನ ಮೇಲೆ ಕಾಲಿಟ್ಟು ಅದರಿಂದ ಬಚಾವಾಗಿ ಬಂದಿದ್ದರೂ ಎದೆ ಡವಗುಡುತ್ತಿತ್ತು. ಓಡುತ್ತಲೇ ಮನೆಯನ್ನು ಸೇರಿದೆವು. ಆಗಷ್ಟೆ ಹಸಿಯಾಗಿದ್ದ ಅನುಭವವನ್ನು ಮನೆಯಲ್ಲಿ ಗಾಬರಿ ಮೂಡುವಂತೆ ಹೇಳಿದೆವು. `ನಾಳೆಯಿಂದ ಇಸ್ಗೋಲಿಗೆ ಹೋಗಾದೇ ಬ್ಯಾಡ' ಎಂದು ಹೇಳುತ್ತಾರೇನೋ ಎಂದು ಆಸೆಯಿಂದ ನಿರೀಕ್ಷಿಸಿದೆವು. ಜಗುಲಿಯಲ್ಲಿ ಕುಳಿತು ಪುಂಡಿನಾರನ್ನು ಸೀಳಿ ಬತ್ತದ ಹೊರೆ ಕಟ್ಟುವ ಹಗ್ಗ ಹೊಸೆಯುತ್ತಿದ್ದ ಅಪ್ಪ ಅದನ್ನೆಲ್ಲ ಕೇಳಿಸಿಕೊಂಡವನು ಎದ್ದು ಬಂದು ಬಾಯಲ್ಲಿದ್ದ ತಾಂಬೂಲವನ್ನು ಅಂಗಳದ ಮೂಲೆಯಲ್ಲಿ ಉಗಿದು ಬಾಯಿಗೆ ಬಿಡುವು ಮಾಡಿಕೊಂಡ. `ಗದ್ದೆ ಕೊಯ್ಲು ಆದಮೇಲೆ ಇಲಿ ಹೆಗ್ಗಣ ತಿನ್ನಾಕೆ ಹಾವು ಬರ್ತಾವೆ. ಅದೇನು ಕೇರೆ ಹಾವಿರಬೇಕು. ಅದರ ಪಾಡಿಗೆ ಹೋಗಿರುತ್ತೆ' ಎಂದು ಸಮಾಧಾನವಾಗಿ ಹೇಳಿದ. ಅಪ್ಪನ ಪ್ರತಿಕ್ರಿಯೆಗೆ ನಿರಾಸೆಯಾಗಿ `ಅದಕ್ಕೆ ಹನ್ನೆರಡು ವರ್ಷ ಸೇಡು ಇರುತ್ತಂತಲ್ಲ' ಎಂದು ನಾನು ಮೆತ್ತಗೆ ಹೇಳಿದೆ. `ಹೋಗೊ ಹೋಗು, ಹರಿಯೋ ಹಾವು ಮುರಿಯೋ ಹುಲಿ ಒಂದೇ ಕಡೆ ಇರಾದಿಲ್ಲ..' ಎಂದು ಹೇಳುತ್ತ ಹಗ್ಗ ಹೊಸೆಯುವ ಕೆಲಸ ಮುಂದುವರಿಸಿದ.
ಅಪ್ಪನಿಗೆ ಕೆಲವೇ ತಿಂಗಳ ಹಿಂದೆ ಮಳೆಗಾಲದಲ್ಲಿ ನಾನು ಹಳ್ಳಕ್ಕೆ ಬಿದ್ದು ಪಾರಾಗಿ ಬಂದ ಸುದ್ದಿ ಅಕ್ಕಮ್ಮನಿಂದ ತಿಳಿದಿತ್ತು. ಆದ್ದರಿಂದ ಮುಂದೆ ಒಂದೇ ವಾರದಲ್ಲಿ ಮನೆಗೆ ಕೋಡಿಕೊಪ್ಪಕ್ಕಿಂತಲೂ ಹತ್ತಿರವಿದ್ದ, ಹಕ್ಕಲಿನಲ್ಲಿ ದಾರಿ ಇದ್ದ ಜಂಬಳ್ಳಿಯ ಶಾಲೆಗೆ ಸೇರಿಸಿದ. ಜಂಬಳ್ಳಿಯಲ್ಲಿ ನಾಲ್ಕನೆಯ ತರಗತಿವರೆಗೆ ಓದಿ ಐದನೇ ತರಗತಿಗಾಗಿ ರಿಪ್ಪನ್ಪೇಟೆಗೆ ಹೋಗಬೇಕಾಯಿತು. ಮನೆಯಿಂದ ಓಡಾಡುವುದು ದೂರ ಎಂಬ ಕಾರಣಕ್ಕೆ ಪೇಟೆಗೆ ಹತ್ತಿರವೇ ಇದ್ದ ಸೋದರಮಾವನ ಮನೆ ಸೇರಿಕೊಂಡೆ.
* * *
ರಿಪ್ಪನ್ಪೇಟೆ ಆಗ ನಾಲ್ಕು ಮುಖ್ಯರಸ್ತೆಗಳು ಸಾಗಿರುವ ಕೇಂದ್ರಸ್ಥಳವಾಗಿದ್ದ ಕಾರಣ ಪ್ರಾಮುಖ್ಯತೆ ಪಡೆದಿತ್ತು. ರಸ್ತೆ ಬದಿ ಅಂಗಡಿ ಸಾಲುಗಳು ಇದ್ದು ಸಂಜೆ ವೇಳೆಗೆ ಅಲ್ಲಲ್ಲಿ ಬೀದಿ ದೀಪಗಳನ್ನು ಉರಿಸುತ್ತಾ ಇದ್ದ ಕಾರಣ ಅದಕ್ಕೆ ಪೇಟೆಯ ಕಳೆ ಬಂದಿತ್ತು. ಹೊಸನಗರದಿಂದ ಶಿವಮೊಗ್ಗಕ್ಕೆ, ತೀರ್ಥಹಳ್ಳಿಯಿಂದ ಸಾಗರಕ್ಕೆ ಸಾಗುವ ರಸ್ತೆಗಳು ಇಲ್ಲಿಯೇ ಸಂಧಿಸುತ್ತಿದ್ದ ಕಾರಣ ಜನರ ಓಡಾಟವೂ ಇತ್ತು. ಪೇಟೆಯೂ ನಾಲ್ಕು ರಸ್ತೆಗಳ ಅಕ್ಕಪಕ್ಕ ಬೆಳೆಯುತ್ತಿತ್ತು. ಆದರೆ ಆಗಿನ ಮನೆಗಳೆಲ್ಲವೂ ಬಹುತೇಕ ಹಂಚಿನವಾಗಿದ್ದವು. ಅಲ್ಲಲ್ಲಿ ಹುಲ್ಲಿನ ಮನೆಗಳೂ ಇದ್ದವು. ಉಡುಪಿ ಬ್ರಾಹ್ಮಣರ ಕಾಫಿ ಕ್ಲಬ್, ಮಿತ್ರ ಸಮಾಜ, ಮರಾಠ ಮಿಲಿಟರಿ ಹೋಟಲ್, ಸರ್ಕಲ್ ಲಂಚ್ ಹೋಂ ಇತ್ಯಾದಿ ನಾಲ್ಕು ರಸ್ತೆಗಳಲ್ಲಿ ತಲೆ ಎತ್ತಿದ್ದವು. ಸೋಮವಾರ ಸಂತೆಯನ್ನು ಸೇರಿಸುವುದು ಅದೇ ಸುಮಾರಿನಲ್ಲಿ ಆರಂಭವಾಗಿತ್ತು. ಸೋದರಮಾವನ ಮನೆಯಿಂದ ನಡೆದು ಬರುತ್ತಿದ್ದ ನನಗೆ ಜೊತೆಗಾರರಾಗಿ ಸಹಪಾಠಿಗಳೂ, ನನಗಿಂತ ಎರಡು ತರಗತಿ ಮುಂದೆ ಇದ್ದ `ಹಿರಿಯ'ರೂ ಸಿಗುತ್ತಿದ್ದರು. ತರಗತಿಗಳಲ್ಲಿ ಟೆಸ್ಟುಗಳು ನಡೆಯುತ್ತಿದ್ದವಾದರೂ ಓದಿನ ಒತ್ತಡ ಅನುಭವಕ್ಕೆ ಬರುತ್ತಿರಲಿಲ್ಲ. ಶಾಲೆಯ ಅವಧಿಯಲ್ಲಿ ಕಬಡ್ಡಿ, ವಾಲಿಬಾಲ್ ಆಟಗಳನ್ನು ಹುಡುಗರಿಂದ ಆಡಿಸಲಾಗುತ್ತಿತ್ತು. ನಾನು ಮೊದಲಿನಿಂದ ದೈಹಿಕವಾಗಿ ಅಷ್ಟೇನೂ ದೃಢವಾಗಿರಲಿಲ್ಲ. ಅದಕ್ಕೆ ಹಳ್ಳಿಯಿಂದ ಬಂದಿದ್ದ ಹಿಂಜರಿಕೆಯೂ ಸೇರಿ ನಾನು ಅಂಥ ಆಟಗಳಲ್ಲಿ ಸೇರುತ್ತಿರಲಿಲ್ಲ. ರಿಪ್ಪನ್ಪೇಟೆಗೆ ಸುತ್ತಲಿನ ಹಳ್ಳಿಗಳಿಂದಲೇ ಹೆಚ್ಚಿನ ವಿದ್ಯಾಥರ್ಿಗಳು ಬರುತ್ತಿದ್ದರು. ಹಳ್ಳಿಗಳಲ್ಲಿ ಪ್ರಚಲಿತವಿದ್ದ ಬುಗುರಿ, ಗೋಲಿ ಆಟಗಳು ಪೇಟೆಯವರೆಗೂ ಬಂದಿದ್ದವು. ಅವುಗಳಿಗೆ ಕಬಡ್ಡಿ, ವಾಲಿಬಾಲ್ ನಂಥ ಕ್ರೀಡೆಗಳಿಗೆ ನೀಡುವ ಪ್ರಾಶಸ್ತ್ಯ ಇರಲಿಲ್ಲವಾದ್ದರಿಂದ ಶಾಲೆಯಿಂದ ವಾಪಸು ಮನೆಗೆ ತೆರಳುವಾಗ ಅವು ಹಳ್ಳಿ ಹಾದಿ ಬದಿಯಲ್ಲಿ ವಿಜೃಂಭಿಸುತ್ತಿದ್ದವು. ಜೇಬಲ್ಲಿ ಗೋಲಿ ಇಟ್ಟುಕೊಳ್ಳುವುದು ಪ್ರತಿಷ್ಠೆಯ ಸಂಗತಿಯೂ ಆಗಿತ್ತು. ಹಳ್ಳಿ ಹುಡುಗರ ಆಸಕ್ತಿ, ಉತ್ಸಾಹಗಳನ್ನು ಅರಿತಿದ್ದ ಪೇಟೆಯ ಕೆಲವು ಕಿರಾಣಿ ಅಂಗಡಿ ಮಾಲೀಕರು ಬಣ್ಣಬಣ್ಣದ ಗೋಲಿಗಳನ್ನು ಎದ್ದು ಕಾಣುವಂತೆ ಗಾಜಿನ ಜಾಡಿಗಳಲ್ಲಿ ಪ್ರದಶರ್ಿಸಿ ಹುಡುಗರನ್ನು ಸೆಳೆಯುತ್ತಿದ್ದರು. ನಾನೂ ಮಾಧ್ಯಮಿಕ ಶಾಲೆಯಲ್ಲಿದ್ದಾಗ ಗೋಲಿಗಳನ್ನು ಜೇಬಲ್ಲಿ ದಾಸ್ತಾನು ಇಟ್ಟುಕೊಳ್ಳುವ ಶೋಕಿಯನ್ನೂ ಮಾಡಿದ್ದೆ.
ಹಾದಿ ಬದಿಯಲ್ಲಿ ಸಣ್ಣದೊಂದು ಗುಳಿ ಸಿಕ್ಕಿದರೆ ಅಲ್ಲಿಯೇ ಗೋಲಿಯಾಟಕ್ಕೆ ವೇದಿಕೆ ಸಿದ್ಧವಾಗಿ ಬಿಡುತ್ತಿತ್ತು. ಎರಡು ಗುಳಿಗಳ ಮಧ್ಯೆ ಗೋಲಿಯನ್ನು ಗೋಲಿಯಿಂದ ತಳ್ಳುವ ಆಟ. ಅದರಲ್ಲಿ ಹನ್ನೆರಡೋ ಹದಿಮೂರೋ ನಡೆಗಳ ಲೆಕ್ಕಾಚಾರ. ಅವುಗಳಿಗೆ ಗೋಲಿಯಾಟದ ವಿಶಿಷ್ಟ ಪರಿಭಾಷೆ. `ಒಕ್ಕರಸೆಟ್ಟಿ, ಇಕ್ಕಿರಿ ಎರಡು, ಮುಕ್ಕರಮುದ್ದೆ, ನಕ್ಕರ ನಾಲೆ, ಐದಾರುಂಡ, ಆರಂತಾರ, ಏಳಂಬೋಳಿ, ಎಂಟುಮಣ ಶುಂಠಿ, ಒಮ್ಮನ ಗೋಲ, ತಿಮ್ಮನ ತೇಲ. ತ್ಯಾದಿ ಗೋಲ, ಬೂದಿ ನೆಕ್ಕ...' ಇತ್ಯಾದಿ ಪ್ರಾಸಬದ್ಧ ಲೆಕ್ಕಾಚಾರದ ನಂತರ ಹನ್ನೆರಡೋ, ಹದಿಮೂರೋ ನಡೆಗಳನ್ನು ಮುಗಿಸಿ ಎದುರಾಳಿಯ ಗೋಲಿಯನ್ನು ಗುಳಿಗೆ ತಳ್ಳಿದನೆಂದರೆ ಆತ ಗೆಲುವು ಸಾಧಿಸಿದಂತೆ. ಸೋತವನು ಅದೇ ಗುಳಿಯ ಮುಂದೆ ಗೋಲಿಯನ್ನು ಇರಿಸಿ ಮುಂಬೆರಳಿನಿಂದ ತಳ್ಳುತ್ತಾ ಅದನ್ನು ಇನ್ನೊಂದು ಗುಳಿಗೆ ತಳ್ಳಿ ತನ್ನ ಸೋಲಿನ ಕಹಿಯನ್ನು ಅನುಭವಿಸಬೇಕಿತ್ತು. ಆದರೂ, ನಂತರದ ಆಟದಲ್ಲಿ ಆತನೇ ಎಲ್ಲ ಹದಿಮೂರು ನಡೆಗಳನ್ನೂ ಬೇಗ ಮುಗಿಸಿ ಎದುರಾಳಿಯನ್ನು ಮುಂಬೆರಳು ಗೋಲಿ ತಳ್ಳಾಟಕ್ಕೆ ಒಳಪಡಿಸಿ ಸಮಾಧಾನ ಪಡುವುದಕ್ಕೆ ಪ್ರಯತ್ನ ಪಡುತ್ತಿದ್ದ.
ಗೋಲಿಯಾಟಕ್ಕೆ ಇಬ್ಬರು ಇಲ್ಲವೇ ಮೂವರು ಇದ್ದರೆ ಸಾಕಾಗುತ್ತಿತ್ತು. ಆದರೆ ಗುಂಪು ಸೇರಿ ಆಡುವ `ಸುಳ್ಳಿ ಪಟ್ಟೆ' ಎಂಬ ಆಟ ತುಂಬ ರೋಚಕವಾಗಿರುತ್ತಿತ್ತು. ಅದು ಈಗಿನ ಆಟ್ಯಾಪಾಟ್ಯಕ್ಕೆ ಹತ್ತಿರದ ಗುಂಪು ಪಂದ್ಯ. ಎರಡು ತಂಡಗಳು. ನಾಲ್ಕು ಅಥವಾ ಐದು ಪಟ್ಟೆಗಳು. ಅವು ಸಮಾನಾಂತರವಾಗಿರುತ್ತಿದ್ದವು. ಒಂದು ಪಟ್ಟೆಗೂ ಇನ್ನೊಂದು ಪಟ್ಟೆಗೂ ಇರುವ ಅಂತರಕ್ಕೆ ಒಂದು ಲೆಕ್ಕಾಚಾರ. ಸಮಾನಾಂತರ ಪಟ್ಟೆಗಳ ಮಧ್ಯೆ ಅವೆಲ್ಲವನ್ನೂ ಕೂಡಿಸಿದ ಒಂದು ಪಟ್ಟೆ. ತಂಡದ ಮುಖಂಡ ಮುಂದಿನ ಪಟ್ಟೆಯನ್ನಲ್ಲದೆ, ಮಧ್ಯದ ಪಟ್ಟೆಯಲ್ಲಿಯೂ ಓಡಾಡಿ ಎದುರು ತಂಡದ ಹಿರಿಯಾಳುಗಳನ್ನು ಔಟ್ ಮಾಡುವ ಅಧಿಕಾರ ಪಡೆದಿರುತ್ತಿದ್ದ. ಅವನಿಗೆ ಕದುರುಗಣೆ ಅಂತ ಹೆಸರು. ಸುಳ್ಳಿಪಟ್ಟೆಯ ಆಟದ ವಿವರಗಳು ಹೆಚ್ಚಿನ ನೆನಪು ಉಳಿದಿಲ್ಲ. ಏಕೆಂದರೆ ಆ ಆಟ ಈಗ ಚಾಲತಿಯಲ್ಲಿಯೇ ಇಲ್ಲ. ಆದರೆ ಅದೇ ಆಟದಲ್ಲಿ ಎರಡೂ ತಂಡಗಳಿಗೆ ಅನುಕೂಲವಾಗಿ ವತರ್ಿಸುವ ಒಂದು ಪಾತ್ರಕ್ಕೆ `ಹಾಲುಂಡಿ' ಎಂಬ ಹೆಸರಿತ್ತು. ಇಸಪೇಟಿನ ಆಟದಲ್ಲಿ ಜೋಕರ್ ಗೆ ಇರುವಂಥ ಸ್ಥಾನ ಅದು. `ಅವನು ಬಿಡು ಹಾಲುಂಡಿ' ಎಂಬ ಪಡೆಮಾತು ಎರಡೂ ಕಡೆಯವರಲ್ಲಿ ಮಿತ್ರತ್ವದಲ್ಲಿದ್ದರೂ ನಂಬಿಕೆಗೆ ಪಾತ್ರನಲ್ಲದ ರೀತಿಯಲ್ಲಿ ವತರ್ಿಸುವವನೆಂಬ ಅರ್ಥದಲ್ಲಿ ನಮ್ಮ ಅಂದಿನ ಗೆಳೆಯರ ಬಳಗದಲ್ಲಿ ಪ್ರಸ್ತಾಪಿಸುವುದರಲ್ಲಿ ಉಳಿದುಕೊಂಡಿದೆ.
* * *
ನಮ್ಮೂರಲ್ಲಿ ನಾಲ್ಕನೇ ತರಗತಿಯವರೆಗೆ ಇದ್ದಾಗ ನನಗೆ ಕುವೆಂಪು ಸಾಹಿತ್ಯದ ಪರಿಚಯ ಆಗಿತ್ತು. ಆಗ ಅವರು ಕೆ.ವಿ.ಪುಟ್ಟಪ್ಪ ಎಂದೇ ಪರಿಚಿತರು. `ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ..' ಎಂಬುದರಿಂದ ಹಿಡಿದು ಕಾನೂರು ಹೆಗ್ಗಡತಿಯ ಕಿಲಿಸ್ತರ ಜಾಕಿ, ಶಿಕಾರಿಯ ಪುಟ್ಟಣ್ಣ, ಬಾಡುಗಳ್ಳ ಸೋಮ ಮೊದಲಾದವುಗಳನ್ನು ನನ್ನ ಅಣ್ಣಂದಿರಾದ ರಾಮಣ್ಣ, ಟೋಪಣ್ಣ ಮತ್ತು ಸಣ್ಣಣ್ಣ ನಾನಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಯಾಗಿದ್ದಾಗಲೇ ರಾತ್ರಿ ಹೊತ್ತು ಅಡಿಕೆ ಸುಲಿಯುತ್ತಿದ್ದಾಗ ಓದುತ್ತಿದ್ದು ನನ್ನಲ್ಲಿ ಕುವೆಂಪು ಕುರಿತ ಕುತೂಹಲವನ್ನು ಮೂಡಿಸಿದ್ದರು. ಮಾಧ್ಯಮಿಕ ಶಾಲೆಯಲ್ಲಿನ ಪಠ್ಯಗಳಲ್ಲಿ ಕುವೆಂಪು ಅವರ ಒಂದಾದರೂ ಪದ್ಯಗಳು ಇರುತ್ತಿದ್ದವು. ಅವುಗಳನ್ನು ಬಾಯಿ ಪಾಠ ಮಾಡಿಕೊಂಡಿದ್ದ ನೆನಪು ಇತ್ತು. ಹೈಸ್ಕೂಲಿನಲ್ಲಿಯೂ ಅವರ ಕವನಗಳಿರುತ್ತಿದ್ದವು. ಗದ್ಯದ ಪಾಠಭಾಗಗಳಲ್ಲಿ ಕುವೆಂಪು ಕೃತಿಗಳು ಇದ್ದೇ ಇರುತ್ತಿದ್ದವು. ಎಸ್ಎಸ್ಎಲ್ಸಿ ಪಠ್ಯದಲ್ಲಿ ಕವಿ ಕಾವ್ಯ ಪರಿಚಯದಲ್ಲಿ ಹೆಚ್ಚಿನ ವಿವರಗಳಿರುತ್ತಿದ್ದು ಅವರ ವ್ಯಕ್ತಿತ್ವಕ್ಕೆ ಹತ್ತಿರವಾದ ಆಪ್ತಭಾವ ಮೊಳಕೆಯ ಸ್ವರೂಪದಲ್ಲಿತ್ತು. ಅವರು ನಮ್ಮದೇ ಊರಿನ ಹತ್ತಿರದ ತೀರ್ಥಹಳ್ಳಿ ತಾಲೂಕಿನವರು. ಅಲ್ಲದೆ, ನಾವು ನಿತ್ಯ ಬಳಸುತ್ತಿದ್ದರೂ ನಮ್ಮ ಶಾಲೆಯ ದಿನಗಳಲ್ಲಿ ಪೇಟೆಯ ಹುಡುಗರ ಎದುರು ಬಹಿರಂಗವಾಗಿ ಹೇಳಿಕೊಳ್ಳಲು ಸಂಕೋಚಪಡುತ್ತಿದ್ದ ಮೀನು-ಮಾಂಸದ ಊಟಕ್ಕೆ ಸಾಹಿತ್ಯದಲ್ಲಿ ಸ್ಥಾನ ಕಲ್ಪಿಸಿದ್ದವರು. ಆದ್ದರಿಂದ ಕುವೆಂಪು ಅವರ ಬಗ್ಗೆ ಬೆರಗಿನ ಭಾವನೆ ಇತ್ತು. ನೇಗಿಲು ಹಿಡಿದು ಗದ್ದೆಯಲ್ಲಿ ಉತ್ತು ಬಿತ್ತುವ ಕೆಲಸವನ್ನು ಶಾಲಾದಿನಗಳಲ್ಲಿ ಮಾಡುತ್ತಿದ್ದ ನನಗೆ ರೈತನನ್ನು ಯೋಗಿಯ ರೂಪದಲ್ಲಿ ಚಿತ್ರಿಸಿದ ಕುವೆಂಪು ಅಸಾಮಾನ್ಯರಾಗಿ ಕಂಡಿದ್ದರು.
ನಮಗೆ ದೊಡ್ಡ ಮನೆಯಿಂದ ಹಿಸ್ಸೆಯಾಗಿ ಬಂದಾಗ ಗದ್ದೆ ತೋಟಗಳೇನೋ ಇದ್ದವು. ಆದರೆ ಮೂವರು ಅಣ್ಣಂದಿರು ಮದುವೆಯಾಗಿ ಅವರ ಸಂಸಾರಗಳು ದೊಡ್ಡದಾಗುತ್ತಿದ್ದವು. ಗದ್ದೆಯಲ್ಲಿ ಬೆಳೆದ ಬತ್ತ ಊಟಕ್ಕಷ್ಟೆ ಸಾಕಾಗುತ್ತಿತ್ತು. ತೋಟದ ಉತ್ಪತ್ತಿ ಮೇಲು ಖಚರ್ಿಗೆ ಎಂಬುದು ಅಂದಿನ ಅಂದಾಜು. ಹೆಚ್ಚುತ್ತಿದ್ದ ಸಂಸಾರದ ಖಚರ್ಿಗೆ ನಮ್ಮ ತೋಟವನ್ನು ಸಾಧ್ಯವಿದ್ದಷ್ಟು ಹೆಚ್ಚಿಸುವುದು ಅಗತ್ಯವೆಂದು ಅಪ್ಪ ಭಾವಿಸಿದ್ದ. ಮನೆಯ ತೋಟದ ಸುತ್ತ ದಟ್ಟವಾಗಿದ್ದ ಕಾಡು. ಮನೆಯಿಂದ ತೋಟಕ್ಕೆ ಹೋಗುವ ದಾರಿಯಲ್ಲಿ ಮಸೆ ಹುಲ್ಲು. ತಗ್ಗು ದಿನ್ನೆಯ ಜಾಗವನ್ನು ಸಮತಟ್ಟಾಗಿಸಿ ಅಡಿಕೆ ಸಸಿಗಳನ್ನು ನೆಟ್ಟು ತೋಟವನ್ನು ವಿಸ್ತರಿಸುವ ಅಗತ್ಯವನ್ನು ಅಪ್ಪ ಮನಗಂಡಿದ್ದ. ಇದರ ಜೊತೆಗೆ ಹಳೆಯ ತೋಟಕ್ಕೆ ಕ್ರಮಪ್ರಕಾರವಾಗಿ ಬೇಸಾಯ, ಉದಿ, ಮಧ್ಯೆ ತೋಡು ತೆಗೆಯುವುದೇ ಮೊದಲಾದ ಕೆಲಸಗಳನ್ನು ಮಾಡಿಸಬೇಕಿತ್ತು. ಆಗ ನಮ್ಮ ಮನೆಯ ಕೆಲಸಗಳಿಗೆ ಬಂದವರು ಕನ್ನಡ ಜಿಲ್ಲೆಯ ಆಳುಗಳು. ಅವರಿಗೆ ಸೇರೆಗಾರನೊಬ್ಬನ ನೇತೃತ್ವ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬರುತ್ತಿದ್ದವರನ್ನು ಆಗ ಕನ್ನಡ ಜಿಲ್ಲೆಯವರೆಂದೇ ಕರೆಯುವ ವಾಡಿಕೆ. ಅವರಲ್ಲಿ ಹೆಚ್ಚಿನವರು ಈಗಿನ ಉಡುಪಿ ಜಿಲ್ಲೆಗೆ ಸೇರಿದವರಿದ್ದಿರಬೇಕು. ಏಕೆಂದರೆ ಅವರ ಮಾತು ಈಗಿನ ಕುಂದಕನ್ನಡಕ್ಕೆ (ಕುಂದಾಪುರ ಆಜುಬಾಜಿನ ಮಾತು) ಹತ್ತಿರವಾಗಿರುತ್ತಿತ್ತು. ಹೋಗಬೇಕು ಎನ್ನುವುದಕ್ಕೆ `ಹ್ವಾಯ್ಕು', ಬರಬೇಕು ಎನ್ನುವುದಕ್ಕೆ `ಬರ್ಕು' ಎಂಬಂಥ ಮಾತುಗಳು.
ಅವರೆಲ್ಲರೂ ನಮ್ಮ ಮನೆಯ ಹಿತ್ತಲಿನಲ್ಲಿ ಬಿಡಿಬಿಡಿಯಾಗಿ ಗುಡಿಸಲುಗಳನ್ನು ಹಾಕಿಕೊಂಡಿದ್ದರು. ಬಿದಿರಿನ ಗಳುಗಳನ್ನು ಕೋರೆಯಾಗಿ ನಿಲ್ಲಿಸಿ ಅಡಿಕೆ ಸೋಗೆಗಳನ್ನು ಹೊದಿಸಿರುತ್ತಿದ್ದರು. ಒಳಗೆ ಪ್ರವೇಶಿಸಲು ಬಿದಿರಿನ ದಬ್ಬೆಗಳ ಬಾಗಿಲು. ಒಳಗಿನ ಬಿಡಾರದಲ್ಲಿ ಒಂದು ಮೂಲೆಯಲ್ಲಿ ಗಂಜಿ ಬೇಯಿಸಲು ಒಲೆ. ಅದನ್ನು ಅವರು ಬಿಡಾರ ಎಂದು ಕರೆಯುತ್ತಿದ್ದರು. ಎಷ್ಟು ಕುಟುಂಬಗಳಿರುತ್ತಿದ್ದವೋ ಅಷ್ಟು ಬಿಡಾರಗಳು. ಅದರಲ್ಲಿ ಸ್ವಲ್ಪ ದೊಡ್ಡದಾಗಿ ಇರುತ್ತಿದ್ದುದು ಸೇರೆಗಾರನ ಬಿಡಾರ. ಸ್ವಲ್ಪ ಉಬ್ಬು ಹಲ್ಲಿನ, ಉದ್ದನೆಯ ತಲೆಕೂದಲು ಬಿಟ್ಟಿದ್ದ ಗಣಪಣ್ಣ ಎಂಬಾತ ಸೇರೆಗಾರನಾಗಿದ್ದ. ಕೃಶ ಶರೀರದವನಾಗಿದ್ದರೂ ಮಾತಿಗೆ ನಿಂತರೆ ಖಡಕ್ ಎನಿಸುವಂಥ ದಿಟ್ಟತನ. ಗಣಪಣ್ಣ ತೋಟದ ಕೆಲಸ ವಹಿಸಿಕೊಂಡ ಸ್ವಲ್ಪ ದಿನಗಳಲ್ಲೇ ಮನೆಯವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಕೆಲವು ಗಂಡಾಳು, ಇನ್ನು ಕೆಲವು ಹೆಣ್ಣಾಳುಗಳು ನಿತ್ಯವೂ ಕೆಲಸಕ್ಕೆ ಬರುತ್ತಿದ್ದರು. ಕೆಲಸಕ್ಕೆ ಬಂದವರಿಗೆ ಸಂಜೆ ಹೊತ್ತು ಪಡಿ ಕೊಡುವುದು ಮನೆಯಲ್ಲಿದ್ದವರ ಕೆಲಸ. ಪಡಿ ಎಂದರೆ ಆಳಿನ ಲೆಕ್ಕದಲ್ಲಿ ಅಕ್ಕಿ. ತಾಂಬೂಲದ ರೂಪದಲ್ಲಿ ನಾಲ್ಕು ಅಡಿಕೆ ಹೋಳು, ಎರಡು ವೀಳೆಯದೆಲೆ. ಜೊತೆಗೆ ಚೂರು ಹೊಗೆಸೊಪ್ಪಿನ ಎಸಳನ್ನೂ ಕೊಡುವುದಿತ್ತು. ಮನೆಯಲ್ಲಿ ಅವ್ವನೋ, ಅತ್ತಿಗೆಯರೋ ಒಳಗಡೆ ಕೆಲಸದಲ್ಲಿದ್ದಾಗ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಾದ ನಮಗೆ ಪಡಿ ಕೊಡುವ ಕೆಲಸ ಬರುತ್ತಿತ್ತು. ಜಗುಲಿಯ ದೊಡ್ಡ ಅಕ್ಕಿ ಮರಿಗೆಯಲ್ಲಿ ಇಳಿದು ಆಳುಗಳಿಗೆ ಸೇರಿನಲ್ಲಿ ಅಕ್ಕಿ ಅಳೆದು ಕೊಡುವ ಸಂಭ್ರಮವನ್ನು ಎಷ್ಟೋ ಸಲ ನಾನು ಅನುಭವಿಸಿದ್ದೆ. ಹುಡುಗನೆಂದೋ ಏನೋ ಕೆಲವು ಆಳುಗಳು ಹೆಚ್ಚಾಗಿ ಎರಡು ಹೋಳು ಅಡಿಕೆಯನ್ನು ಕೊಡಲು ಸಣ್ಣದನಿಯಲ್ಲಿ ಒತ್ತಾಯಿಸಿದರೂ ಮನೆ ಯಜಮಾನಿಕೆಯ ಗತ್ತಿನಲ್ಲಿ ಅದನ್ನು ನಿರಾಕರಿಸುವ ಧೈರ್ಯವನ್ನು ಪ್ರದಶರ್ಿಸಿದ್ದೆ.
ಸೇರೆಗಾರರ ಆಳುಗಳಿಗೆ ಮನೆಯಿಂದ ಅಕ್ಕಿ ಕೊಡುತ್ತಿದ್ದರೂ ಅವರಿಗೆ ಮೇಲು ಖಚರ್ಿಗೆ ಹಣವನ್ನು ಸೇರೆಗಾರ ಗಣಪಣ್ಣನೇ ಕೊಡುತ್ತಿದ್ದಿರಬೇಕು. ಅಥವಾ ವಾರಕ್ಕೊಮ್ಮೆ ಅವನು ಪೇಟೆಗೆ ಹೋಗಿ ಪ್ರತಿ ಬಿಡಾರದವರಿಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತಂದುಕೊಡುತ್ತಿದ್ದನೋ ಏನೋ. ತೋಟದ ಕೆಲಸ ಮುಗಿಸಿ ಬಂದ ಅವರೆಲ್ಲ ಸಂಜೆಯಾಗುತ್ತಲೂ ತಮ್ಮ ತಮ್ಮ ಬಿಡಾರಗಳಲ್ಲಿ ಸೇರಿ ಬಿಸಿ ನೀರಿನ ಸ್ನಾನ ಮುಗಿಸಿ ಚಿಮಿಣಿ ದೀಪದ ಮಬ್ಬು ಬೆಳಕಲ್ಲಿ ಊಟವನ್ನು ಮುಗಿಸಿ ಬೇಗನೇ ನಿದ್ದೆಗೆ ಇಳಿಯುತ್ತಿದ್ದರು. ಹೆಣ್ಣಾಳುಗಳು ಮನೆಯ ಹಿತ್ತಲಿನಲ್ಲಿ ಬೆಳೆದಿರುತ್ತಿದ್ದ ಸೊಪ್ಪು ತರಕಾರಿಗಳನ್ನೋ, ಒಣಮೀನನ್ನೋ ಊಟಕ್ಕೆ ಅಣಿಗೊಳಿಸುತ್ತಿದ್ದರು. ಒಂದೇ ಕಡೆ ಅಡಿಗೆ ಮಾಡುವುದಾಗಲೀ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದುದಾಗಲೀ ಇರಲಿಲ್ಲ. ಪ್ರತಿ ಬಿಡಾರವೂ ಪ್ರತ್ಯೇಕ ಮನೆಯಂತೆ ಇರುತ್ತಿತ್ತು.
ಇದನ್ನು ಕಣ್ಣಾರೆ ಕಂಡಿದ್ದ ನನಗೆ `ಕಾನೂರು ಹೆಗ್ಗಡಿತಿ'ಯಲ್ಲಿ ಬರುವ ಬಾಡುಗಳ್ಳ ಸೋಮ ಹಂದಿಯ ಹುರಿದ ತುಂಡುಗಳನ್ನು ಒಂದೊಂದಾಗಿ ತಿನ್ನುತ್ತ ಕೊನೆಗೆ ಎಲುಬಿನ ಚೂರೊಂದು ಗಂಟಲಲ್ಲಿ ಸಿಕ್ಕಿಕೊಂಡು ಒದ್ದಾಡುವ ಚಿತ್ರಣವನ್ನು ಮನೆಯಲ್ಲಿ ಅಡಿಕೆ ಸುಲಿಯುವಾಗ ಕೇಳಿ ಬೆರಗಾಗಿತ್ತು. ಅಲ್ಲಿನ ವಿವರಣೆಗಳು ಸೋಮನ ಬಾಡುಗಳ್ಳತನವನ್ನು ಬಿಂಬಿಸುವಷ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆಯಲ್ಲವೇ ಎನಿಸಿತ್ತು. ಅವನು ಅದರ ಹಿಂದಿನ ದಿನ ನಡೆದ ಶಿಕಾರಿಯಲ್ಲಿ ಪುಟ್ಟಣ್ಣ ಹೊಡೆದ ಹಂದಿಯ ಮೇಲಿನ ಹಕ್ಕನ್ನು ಚಲಾಯಿಸುವ ಹುಂಬತನದಲ್ಲಿ ಕಿಲಿಸ್ತರ ಜಾಕಿಯಿಂದ ಕೈಗೆ ಪೆಟ್ಟನ್ನು ತಿಂದಿದ್ದ. ಆಗ ನಡೆದ ಚಕಮಕಿಯಲ್ಲಿ ಪುಟ್ಟಣ್ಣ ಪ್ರೀತಿಯಿಂದ ಸಾಕಿದ್ದ ಬೇಟೆ ನಾಯಿ ಟೈಗರ್ ಕಿಲಿಸ್ತರ ಜಾಕಿಯ ದೊಣ್ಣೆ ಏಟಿನಿಂದ ಮೃತಪಟ್ಟಾಗ ಅದರ ಅಂತ್ಯಕ್ರಿಯೆಯ ಶೋಕದಲ್ಲಿ ಮುಳುಗಿದ್ದ ಪುಟ್ಟಣ್ಣನಿಂದ ಟೈಗರ್ಗೆ ಸಲ್ಲಬೇಕಿದ್ದ ಹಂದಿ ಬಾಡಿನ ಪಾಲನ್ನು ತಾನು ಕೇಳಿ ಪಡೆದುಕೊಂಡಿದ್ದ. ಈ ಎರಡೂ ಹಕ್ಕಿನ ಕಾರಣ ತನಗೆ ಹಂದಿ ಬಾಡಿನಲ್ಲಿ ಹೆಚ್ಚಿನ ಪಾಲು ಸಿಗಬೇಕೆಂದು ಅವನು ಭಾವಿಸಿದ ಎಂಬರ್ಥದ ವಿವರಣೆಗಳು ಅಲ್ಲಿ ಬರುತ್ತವೆಯಲ್ಲ ಎಂಬುದು ಆಶ್ಚರ್ಯದ ಸಂಗತಿಯೂ ಆಗಿತ್ತು. ಅಲ್ಲಿನ ವಿವರಣೆಗಳು ಹೇಗಿವೆಯೆಂದರೆ ಹಂದಿ ಬಾಡನ್ನು ತಂದ ಮೇಲೆ ಗಟ್ಟದ ತಗ್ಗಿನ ಆಳುಗಳೆಲ್ಲ ಒಟ್ಟಿಗೆ ಅಡುಗೆ ಮಾಡಿಕೊಂಡು ಹಿಂದಿನ ರಾತ್ರಿ ಊಟ ಮಾಡಿದರು. ಉಳಿದ ಹುರಿ ತುಂಡನ್ನು ಬೆಳಿಗ್ಗೆ ಗಂಜಿಯೂಟದ ಸಂದರ್ಭದಲ್ಲಿ ಅಷ್ಟಿಷ್ಟು ಬಳಸಿಕೊಂಡರು. ಉಳಿದದ್ದನ್ನು ಮಧ್ಯಾಹ್ನವೋ, ರಾತ್ರಿಯೋ ಬಳಸುವುದಕ್ಕಾಗಿ ಹಾಗೆಯೇ ಎತ್ತಿಟ್ಟಿದ್ದರು ಎಂಬ ಅರ್ಥ ಬರುವಂತೆ ಇವೆ.
ಆ ದಿನ ಕೆಲಸಕ್ಕೆ ಉಳಿ ಮಾಡಿದ್ದ (ಅಂದರೆ `ರಜೆ' ಹಾಕಿದ್ದ) ಸೋಮ ಬಿಡಾರದಲ್ಲಿ ಹಾಗೆಯೇ ಸುಮ್ಮನೆ ಮಲಗಿದ್ದ. ಸ್ವಲ್ಪ ಹೊತ್ತಿಗೆ ಬೇಸರವಾಗಿ ಎದ್ದು ಎಲೆ ಅಡಿಕೆ ಹಾಕಿದ. ಅದನ್ನು ಉಗುಳಿ ಬಾಯಿ ತೊಳೆದುಕೊಳ್ಳಲು ಅಡಿಗೆ ಮನೆಗೆ ಹೋದಾಗ ಹಿಂದಿನ ರಾತ್ರಿ ಮಾಡಿದ್ದ ಹಂದಿಯ ಹುರಿದ ತುಂಡುಗಳನ್ನು ಕಂಡ. ಹಂದಿ ಬಾಡಿನ ಮೇಲೆ ತನಗೆ ಇದ್ದ ಹಕ್ಕನ್ನು ಮತ್ತೊಮ್ಮೆ ನೆನಪಿಗೆ ತಂದುಕೊಂಡ ಅವನು ಒಂದೆರಡು ತುಂಡುಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯತೊಡಗಿದ. ಮೊದಲೆಲ್ಲ ರುಚಿವಶನಾಗಿ ತಿನ್ನುತ್ತಿದ್ದವನು ಕ್ರಮೇಣ ಅದನ್ನು ಹಕ್ಕಿನಂತೆ ಮುಕ್ಕಳಿಸಲು ಆರಂಭಿಸಿದನು. ಯಾರಾದರೂ ಬಂದಾರೆಂಬ ಗಾಬರಿಯಲ್ಲಿ ತಿನ್ನುತ್ತಿದ್ದವನಿಗೆ ಮಾಂಸ ಮೆತ್ತಿದ ಎಲುಬೊಂದನ್ನು ನುಂಗುವ ಅವಸರದಲ್ಲಿ ಅದು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಉಸಿರು ಸಿಕ್ಕಿಕೊಂಡಂತಾಯಿತು. ಅದುವರೆಗೆ ಯಾರೂ ಬಾರದಿರಲಿ ಎಂದು ಹಾರೈಸುತ್ತಿದ್ದವನು ಯಾರಾದರೂ ಬಂದು ಕಾಪಾಡಲಿ ಎಂದು ನಿರೀಕ್ಷಿಸುವಷ್ಟು ಅಸಹಾಯಕನಾದನು ಎಂಬರ್ಥದ ನಿರೂಪಣೆಯನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಎಷ್ಟೇ ಬಾಡುಗಳ್ಳನಾದರೂ ಗಂಟಲಿಗೆ ಸಿಕ್ಕಿ ಹಾಕಿಕೊಳ್ಳುವಷ್ಟು ಗಾಬರಿಯಲ್ಲಿ ಯಾರಾದರೂ ತಿನ್ನುತ್ತಾರೆಯೇ ಎಂದು ಮನೆಯಲ್ಲಿ ಅಡಿಕೆ ಸುಲಿಯುತ್ತಿದ್ದವರು ವ್ಯಾಖ್ಯಾನಿಸುತ್ತಿದ್ದರು. ಎಳೆಯನ ಕುತೂಹಲದಿಂದ ನೋಡುತ್ತಿದ್ದರೂ ಸೋಮನ ಬಾಡು ಪ್ರೇಮ ಅತಿಶಯ ವರ್ಣನೆ ಎಂಬಂತೆ ತೋರುತ್ತಿತ್ತು.
ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ನಮ್ಮಲ್ಲಿಗೆ ಗದ್ದೆ ಕೆಲಸಕ್ಕೆ ಕರಡಿ ಎಂಬಾತ ಬರುತ್ತಿದ್ದ. ಅವನಿಗೆ ಅದೇ ಹೆಸರು ಇಟ್ಟಿದ್ದರೋ, ಗುಂಗುರು ಗುಂಗುರು ಕಪ್ಪು ಕೂದಲಿನ ಕಾರಣ ಅನ್ವರ್ಥಕವಾಗಿ ಆ ಹೆಸರು ಬಂದಿತ್ತೋ ತಿಳಿದಿರಲಿಲ್ಲ. ಅವನಿಗೆ ಮಧ್ಯಾಹ್ನದ ಊಟಕ್ಕೆ ಬಾಳೆಎಲೆಯಲ್ಲಿ ಅಂಚಿನಲ್ಲಿ ಚೆಲ್ಲುವಷ್ಟು ಅನ್ನ ಹಾಕಿದರೂ ಆತ ಬೇಡ ಎನ್ನುತ್ತಿರಲಿಲ್ಲ. ಎರಡನೇ ಸಲಕ್ಕೂ ಅವನು ಅಷ್ಟು ಅನ್ನವನ್ನು ತಿನ್ನುತ್ತಿದ್ದ. ಅವನು ಊಟ ಮಾಡುತ್ತಿದ್ದ ಅನ್ನದ ಪ್ರಮಾಣದಲ್ಲಿ ಇಬ್ಬರು ಗಂಡಸರು ಹೊಟ್ಟೆ ಬಿರಿಯುವಷ್ಟು ಊಟ ಮಾಡಬಹುದಿತ್ತು. ಕರಡಿಯ ಹೊಟ್ಟೆ ಅಳತೆ ಮೀರಿದ್ದನ್ನು ಅವನಿಗೆ ಊಟ ಬಡಿಸುವವರು ಮಾತ್ರವೇ ಗಮನಿಸುತ್ತಿರಲಿಲ್ಲ. ಅವನು ಪಂಕ್ತಿಯಲ್ಲಿ ಊಟಕ್ಕೆ ಕುಳಿತಾಗ ಅಕ್ಕಪಕ್ಕದಲ್ಲಿ ಕುಳಿತವರೆಲ್ಲ ಅವನ ಎಲೆಯನ್ನು ಗಮನಿಸುತ್ತಿದ್ದರು. ಕರಡಿ ಎಂದರೆ ಹೊಟ್ಟೆಬಾಕ ಎನ್ನುವಂತಾಗಿ ಹೋಗಿತ್ತು. ಆದರೆ, ಯಾರೂ ಅದನ್ನು ಅವನ ಎದುರಿನಲ್ಲಿ ಹೇಳಲು ಹೋಗುತ್ತಿರಲಿಲ್ಲ.
ಕರಡಿ ಗದ್ದೆ ಕೆಲಸಕ್ಕೆ ನಮ್ಮ ಮನೆಗಷ್ಟೇ ಬರುತ್ತಿರಲಿಲ್ಲ. ನಮ್ಮ ಊರಿಗೆ ಹತ್ತಿರದ ಗೌಡರ ಮನೆಯ ಕೆಲಸಕ್ಕೂ ಹೋಗುತ್ತಿದ್ದ. ನಮ್ಮ ಮನೆಯಲ್ಲಿ ನಮ್ಮೆಲ್ಲರ ಜೊತೆಗೆ ಊಟಕ್ಕೆ ಕೂರುತ್ತಿದ್ದವನಿಗೆ ಗೌಡರ ಮನೆಯಲ್ಲಿ ಕೊಟ್ಟಿಗೆಯ ಬಳಿ ಕಟ್ಟೆಯಲ್ಲಿ ಕೂರಿಸಿ ಊಟ ಹಾಕುತ್ತಿದ್ದರು. ಅಲ್ಲಿಯೂ ಅವನ ಅಪರಿಮಿತ ಭಕ್ಷಣಾ ಸಾಮಥ್ರ್ಯ ಪ್ರಕಟವಾಗಿತ್ತು. ನಮ್ಮಲ್ಲೇನೋ ಅದನ್ನು ರಹಸ್ಯವಾಗಿ ಇರಿಸಿಕೊಂಡಿದ್ದರೆ, ಗೌಡರ ಮನೆಯವರಿಗೆ ಅಂತಹ ಸೂಕ್ಷ್ಮತೆ ಅವಶ್ಯಕವೆನಿಸಿರಲಿಲ್ಲ. ಗೌಡರ ಮನೆಯ ಆಳುಕಾಳುಗಳೆಲ್ಲ ಕರಡಿಯ ಹೊಟ್ಟೆಬಾಕತನವನ್ನು ಅವನಿಗೆ ನಾಚಿಕೆಯಾಗುವಷ್ಟರ ಮಟ್ಟಿಗೆ ಆಡಿಕೊಳ್ಳುತ್ತಿದ್ದರು. ಅದೇ ಸುಮಾರಿನಲ್ಲಿ ಗೌಡರ ಮನೆಯಲ್ಲಿ ಒಂದು ಮದುವೆ ನಡೆಯಿತು. ಮದುವೆ ಮನೆಗೆ ಹೋಗಿದ್ದ ಕರಡಿ ಊಟಕ್ಕೆ ಕುಳಿತಿದ್ದಾಗ ಗೌಡರು ವಿಚಾರಿಸಿಕೊಳ್ಳಲು ಬಂದವರು `ಕರಡಿಗೆ ಸರಿಯಾಗಿ ಅನ್ನ ಹಾಕ್ರೋ..' ಎಂದು ಊಟದ ಪಂಕ್ತಿಯಲ್ಲಿ ಕುಳಿತಿದ್ದ ನೂರಾರು ಮಂದಿಯ ಎದುರಿಗೆ ಹೇಳಿ ತಮ್ಮ ದೊಡ್ಡಸ್ಥಿಕೆ ಮೆರೆದಿದ್ದರಂತೆ. ಅವರು ಕೂಡ ಪಟೇಲರು. ಮನೆಯಲ್ಲಿ ಜೀತದ ಆಳುಗಳೂ ಇದ್ದ ಜಮೀನುದಾರರು. ಕಾನೂರು ಚಂದ್ರಯ್ಯಗೌಡರಂತೆ, ಕುಪ್ಪಳಿಯ ಪಟೇಲರಂತೆ.
ಗೌಡರ ಮನೆಗಳೆಂದರೆ ಒಳಗಡೆ ದೊಡ್ಡ ಭಾವಂತಿ ಅಂಗಳ ಇರುವ ಸುತ್ತು ಪ್ರಾಕಾರದ ಕಟ್ಟಡಗಳು. ಚಿಕ್ಕವನಿದ್ದಾಗ ಒಂದು ಸಲ ಯಾವುದೋ ಮದುವೆ ಸಂದರ್ಭದಲ್ಲಿ ಹುಡುಗರೊಂದಿಗೆ ಹೋಗಿದ್ದೆ. ಹೆಬ್ಬಾಗಿಲಿನಿಂದ ಪ್ರವೇಶ. ಪ್ರವೇಶಿಸುತ್ತಲೂ ಒಂದು ಕಡೆ ಕೊಟ್ಟಿಗೆ. ಕೊಟ್ಟಿಗೆಗೆ ಹೊಂದಿಕೊಂಡಂತೆ ದೊಡ್ಡ ಅಂಗಳ. ಅಂಗಳಕ್ಕೆ ನೇರ ಬಿಸಿಲು ಬರುತ್ತಿತ್ತು. ಮೈಸೂರು ಮಂಡ್ಯ ಕಡೆಯ ಹಳ್ಳಿಗಳಲ್ಲಿ ಸಿರಿವಂತ ರೈತರು ಕಟ್ಟಿಸಿಕೊಂಡ ತೊಟ್ಟಿ ಮನೆಗಳಂತೆ. ಅಂಗಳಕ್ಕೆ ಹೊಂದಿಕೊಂಡಂತೆ ಬಯಲಿನ ಅಂಕಣ. ಅದನ್ನು ಪಾತಾಳಂಕಣ ಎಂದು ಕರೆಯುವುದು ವಾಡಿಕೆ. ಅದರ ಮೇಲುಗಡೆ ಜಗುಲಿ ಎಂಬ ಪ್ರದೇಶ. ಸ್ವಲ್ಪ ಎತ್ತರಕ್ಕಿರುವ ಜಗುಲಿಯಲ್ಲಿ ಒಳಮನೆಗೆ ಪ್ರವೇಶಿಸುವ ಕುಸುರಿ ಕೆಲಸದ ಬಾಗಿಲು. ಅದರ ಪಕ್ಕದಲ್ಲಿ ಗೌಡರು ಕುಳಿತುಕೊಳ್ಳುವ ಕುಚರ್ಿ. ಅದು ಅವರ ದಬರ್ಾರಿನ ಜಾಗ. ಈ ಜಾಗದಲ್ಲಿ ಕುಳಿತುಕೊಂಡೇ ಆಳುಕಾಳುಗಳನ್ನು ಗದರಿಸುವುದು. ಜಗುಲಿ ಹತ್ತುವುದು ಮನೆಯವರು ಮತ್ತು ಬಂಧುಗಳು ಮಾತ್ರ. ಆಳುಗಳು, ಹೊರಜಾತಿಯವರು ಅಂಗಳದಲ್ಲಿ ನಿಂತುಕೊಂಡೇ ಗೌಡರ ಆದೇಶಗಳನ್ನು ಕೇಳಬೇಕು. ಕೊಟ್ಟಿಗೆಯ ಇನ್ನೊಂದು ಪಾಶ್ರ್ವಕ್ಕೆ ಪಾತಾಳಂಕಣದ ವಿಸ್ತರಣೆ. ಅದು ಮನೆಯ ಹಿಂದುಗಡೆಯವರೆಗೂ ಸಾಗುವ ಕಡಿಮಾಡು. ಅಲ್ಲಿ ಅಡಿಕೆ ಬೇಯಿಸುವ ಒಲೆಗಳು. ಕರೆಯುವ ಹಸುಗಳ ಕೊಟ್ಟಿಗೆ. ಕರುಗಳನ್ನು ಬಿಡುವ ಸಣ್ಣ ಕೊಟ್ಟಿಗೆ. ಇಷ್ಟಿದ್ದರೂ ಈ ಕಡಿಮಾಡು ಗೌಡರ ಅವಕೃಪೆಗೆ ಒಳಗಾದವರನ್ನು ಕಂಬಕ್ಕೆ ಕಟ್ಟಿ ಶಿಕ್ಷಿಸುವ ಲಾಕಪ್ಪಿನಂತೆಯೂ ಕುಪ್ರಸಿದ್ಧವಾದದ್ದು. `ಏಯ್, ಕರ್ಕೊಂಡು ಹೋಗೋ ಅವನ್ನ ಕಡಿಮಾಡು ಕಡೆ..' ಎಂದು ಗೌಡರು ಆದೇಶ ಮಾಡಿದರೆಂದರೆ ಅವರ ಕೋಪಕ್ಕೆ ಗುರಿಯಾದ ವ್ಯಕ್ತಿಗೆ ಕಂಬಕ್ಕೆ ಕಟ್ಟಿ ಬಾರಕೋಲಿನಿಂದ ಹೊಡೆಯುವುದೆಂದೇ ಅರ್ಥ. ಹೆಬ್ಬಾಗಿಲಿನಿಂದ ಒಳಪ್ರವೇಶಿಸಿದರೆ ಕೋಟೆಯನ್ನು ಹೊಕ್ಕಂತೆ. ಭದ್ರತೆ, ಪ್ರತಿಷ್ಠೆ, ಯಜಮಾನಿಕೆಯ ಪ್ರತೀಕದಂತೆ ದೊಡ್ಡ ಗೌಡರುಗಳ ಮನೆ.
ನಾನು ನೋಡಿದ್ದ ಗೌಡರ ಮನೆ ನಮ್ಮ ಹಳ್ಳಿಗೆ ಹತ್ತಿರ ಇದ್ದ ಊರಿನದು. ಈ ಗೌಡರಲ್ಲಿ ನಮ್ಮ ಜಮೀನುಗಳೆಲ್ಲ ಸಾಲಕ್ಕೆ ಅಡವಾಗಿದ್ದವು. ಅಪ್ಪನ ಪ್ರಯತ್ನದಿಂದ ವರ್ಷಕ್ಕೆ ಇನ್ನೂರೈವತ್ತು ರೂಪಾಯಿ ಕಂತಿನ ಮೇಲೆ ನಲವತ್ತು ವರ್ಷಗಳ ದೀರ್ಘ ಅವಧಿಗೆ ದೀಡಾಗಿದ್ದವು. ನಾವು ಗೇಣಿ ರೈತರಂತೆ ಗೌಡರ ಒಕ್ಕಲುಗಳಾಗಿರಲಿಲ್ಲ. ಆದರೆ ಗೌಡರಿಂದ ಸಾಲಗಾರರಾಗಿದ್ದೆವು. ಪ್ರತಿ ವರ್ಷ ಕಂತು ಕಟ್ಟಿಕೊಂಡು ಬರದಿದ್ದರೆ ಸಾಲದ ವಸೂಲಿಗೆ ಅವರು ಕ್ರಮ ಕೈಗೊಳ್ಳಬಹುದಿತ್ತು. ಗೌಡರ ಕಿರಾತಕ ಬುದ್ಧಿಯ ಅರಿವಿದ್ದ ಅಪ್ಪ ಮಾಘ ಬಹುಳ ಅಮಾವಾಸ್ಯೆಗೆ ಮೊದಲು ಗೌಡರಿಗೆ ಸಂದಾಯವಾಗಬೇಕಾದ ಕಂತಿನ ಹಣವನ್ನು ಮನಿಆರ್ಡರ್ ಮಾಡಿ ಬಿಡುತ್ತಿದ್ದ. ನಮ್ಮೂರಿನಿಂದ ಒಂದು ಮೈಲು ದೂರವೂ ಇಲ್ಲದ ಗೌಡರ ಮನೆಗೆ ಮನಿ ಆರ್ಡರ್ ಮಾಡುವುದೇಕೆ ಎಂದು ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾಥರ್ಿಯಾಗಿದ್ದ ನನಗೆ ಪ್ರಶ್ನೆ ಎದ್ದಿತ್ತು. ಗೌಡರ ಮನೆಗಳಿಗೆ ಹೋಗಿ ಅಂಗಳದಲ್ಲಿ ನಿಂತು ಅಪಮಾನವಾಗುವ ಸಂಕಟದಿಂದ ಪಾರಾಗಲು ಅಪ್ಪ, ಸಾಲದ ಪ್ರಕರಣ ಕೋಟರ್್ ಕಟ್ಟೆ ಹತ್ತಿದ್ದಾಗ ಹೀಗೆ ಮನಿ ಆರ್ಡರ್ ಮೂಲಕ ಹಣ ಸಂದಾಯ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದನೆಂದು ನಂತರ ಗೊತ್ತಾಗಿ ಅಪ್ಪನ ವ್ಯವಹಾರ ಕೌಶಲ್ಯಕ್ಕೆ ಮೆಚ್ಚುಗೆ ಮೂಡಿತ್ತು. ನಮ್ಮೂರಿನವರು, ಗೌಡರ ಎದುರು ಚರ್ಮದ ಚಪ್ಪಲಿ ಹಾಕಿಕೊಂಡು ನಡೆದಾಡಿದರೆ ಗೌಡರಿಗೆ ಕೋಪ ಬರುತ್ತಿತ್ತಂತೆ.
ಒಮ್ಮೆ ನಮ್ಮೂರಿನ ತಿಮ್ಮಯ್ಯ ಎಂಬುವರು ಗೌಡರ ಮನೆ ಎದುರು ಹಾದು ಹೋಗಿದ್ದಾರೆ. ಹೊಸದಾಗಿ ಹೊಲಿಸಿದ್ದ ಚರ್ಮದ ಚಪ್ಪಲಿಗಳು. ಗಿಕರ್ಿನ ಚಪ್ಪಲಿಗಳಿಂದ ಸ್ವಲ್ಪ ದೂರದವರೆಗೂ ನಡೆದಾಡುವ ಸದ್ದು ಕೇಳುತ್ತಿರುತ್ತದೆ. ಗೌಡರ ಮನೆಯಿಂದ ಅರ್ಧ ಫಲರ್ಾಂಗ್ ದೂರದಲ್ಲಿ ಚೌರದವರ ಮನೆ. ತಲೆ ಚೌರ ಮಾಡಿಸಿಕೊಳ್ಳುವುದಿರಲಿ, ಗಡ್ಡ ಮಾಡಿಸಿಕೊಳ್ಳುವುದಿರಲಿ, ತುತರ್ು ಸಂದರ್ಭ ಇದ್ದರೆ ಅವರ ಮನೆಗಳಿಗೇ ಹೋಗಿ ಬರಬೇಕು. ತಿಮ್ಮಯ್ಯ ತುತರ್ು ಸನ್ನಿವೇಶ ಎಂದುಕೊಂಡು ಚೌರದವನ ಮನೆಗೆ ಹೋಗಿದ್ದಾರೆ. ಗೌಡರ ಮನೆಯ ಎದುರಿಗೆ ಹೋಗುವಾಗ ಅವರ ಚಪ್ಪಲಿಯ ಗಿಕರ್ಿ ಗಿಕರ್ಿ ಸದ್ದು ಮನೆಯ ಒಳಗೆ ಕೊಟ್ಟಿಗೆಯಲ್ಲಿ ಆಳುಗಳೊಟ್ಟಿಗೆ ಏನೋ ಕೆಲಸ ಮಾಡಿಸುತ್ತಿದ್ದ ಗೌಡರಿಗೆ ಕೇಳಿಸಿದೆ. `ಯಾರದ್ದೋ ಅದು ಮೆಟ್ಟಿನ ಸಪ್ಪಳ. ಯಾರಾದ್ರೂ ನೆಂಟರು ಬಂದ್ರೇನೋ ನೋಡ್ರೋ' ಎಂದು ತಮ್ಮ ಆಳೊಬ್ಬನನ್ನು ಹೊರಕ್ಕೆ ಕಳುಹಿಸಿದ್ದಾರೆ. ಅವನು ಹೊರಗೆ ಬಂದವನು ತಿಮ್ಮಯ್ಯನನ್ನು ನೋಡಿ `ಅದೇ, ಒಡಿಯಾ, ತಿಮ್ಮನಾಯ್ಕ, ಮೆಟ್ಟು ಹಾಕ್ಕಂಡು ಜೋರಾಗಿ ಚೌರದವರ ಮನೆ ಕಡೆ ಹೋದ..' ಎಂದು ವರದಿ ಒಪ್ಪಿಸಿದ್ದಾನೆ.
ತಿಮ್ಮಯ್ಯ ಚೌರದವನ ಮನೆ ತಲುಪಿದ್ದಾರೆ. ಎಲ್ಲಿಗೋ ಕೆಲಸದ ಮೇಲೆ ಹೋಗಿದ್ದ ಚೌರದವನನ್ನು ಕಾದಿದ್ದು ಅವನು ಬಂದ ಮೇಲೆ ಚೌರ ಮಾಡಿಸಿಕೊಂಡು ವಾಪಸಾಗಿದ್ದಾರೆ. ವಾಪಸು ಬರುವಾಗ ಮತ್ತೆ ಮೆಟ್ಟಿನ ಗಿಕರ್ು ಗಿಕರ್ು ಶಬ್ದ. ಗೌಡರ ಮನೆ ಹತ್ತಿರ ಬರುತ್ತಿದ್ದಂತೆ ಕಿರಿಕಿರಿಗೆ ಒಳಗಾದ ಗೌಡರು ಮೊದಲು ಕಳಿಸಿದ್ದ ಆಳನ್ನೇ ಕರೆದು `ಅವನ್ನು ಕರ್ಕಂಡು ಬಾ' ಎಂದು ಆದೇಶಿಸಿದ್ದಾರೆ. ಅವನು ಹೊರಗಡೆ ಬಂದು, ಗೌಡರ ಮನೆಯ ಎದುರು ರಸ್ತೆಯಲ್ಲಿ ಸಾಗುತ್ತಿದ್ದ ತಿಮ್ಮಯ್ಯನನ್ನು `ಗೌಡರು ಕರೀತಿದ್ದಾರೆ ಬಾ..' ಎಂದು ಕರೆದಿದ್ದಾನೆ. ಗೌಡರೊಂದಿಗೆ ಯಾವ ವ್ಯವಹಾರ ಇಲ್ಲದಿದ್ದರೂ ದೊಡ್ಡವರು ಕರೆದಾಗ ಹೋಗದಿರುವುದು ಸರಿಯಲ್ಲ ಎಂದುಕೊಂಡು ತಿಮ್ಮಯ್ಯ ಗೌಡರ ಮನೆಗೆ ಹೋಗಿದ್ದಾರೆ. ಅಭ್ಯಾಸದಂತೆ ಹೆಬ್ಬಾಗಿಲ ಹೊರಗಡೆ ತಮ್ಮ ಚರ್ಮದ ಚಪ್ಪಲಿಗಳನ್ನು ಬಿಟ್ಟು ಒಳಗೆ ಪ್ರವೇಶಿಸಿದ್ದಾರೆ. ಅವರು ಒಳಗೆ ಪ್ರವೇಶಿಸುತ್ತಲೇ ಗೌಡರು ತಮ್ಮ ಆಳುಗಳಿಗೆ `ಹೆಬ್ಬಾಗಿಲು ಹಾಕ್ರೋ' ಎಂದು ಆದೇಶಿಸಿದ್ದಾರೆ. ಗೌಡರ ಮನೆಗೆ ಹೋದ ತಕ್ಷಣ ಹೆಬ್ಬಾಗಿಲು ಹಾಕುವುದೆಂದರೆ ಯಾವುದೋ ವಿಚಾರಣೆಗೆ ಒಳಗಾಗುವುದೆಂದು ಕೇಳಿ ತಿಳಿದಿದ್ದ ತಿಮ್ಮಯ್ಯನವರಿಗೆ ಅದು ಪ್ರತ್ಯಕ್ಷ ಅನುಭವಕ್ಕೆ ಬಂದಿದೆ.
ಆಳೊಬ್ಬ ಹೆಬ್ಬಾಗಿಲು ಹಾಕುತ್ತಿದ್ದಂತೆ ಮನೆಯ ಕೋಟೆಯೊಳಗೆ ಸೆರೆಸಿಕ್ಕ ಕೈದಿಯಂತೆ ಅಸಹಾಯಕನಾಗಿದ್ದ ತಿಮ್ಮಯ್ಯನತ್ತ ದೂರದ ಜಗುಲಿಯಿಂದ ಕೆಕ್ಕರಿಸಿ ನೋಡಿದ ಗೌಡರು `ಸೂಳೆಮಗನಿಗೆ ಏನು ದೌಲತ್ತು? ಗಿಕರ್ಿ ಜೋಡು ಹಾಕಿಕೊಂಡು ಜಬರ್ು ತೋರಿಸ್ತಾನೆ, ಹಾಕ್ರೋ ಅವನಿಗೆ ನಾಕು, ಮೆಟ್ಟಲ್ಲಿ..' ಎಂದು ಅಬ್ಬರಿಸಿ ಕೋಪ ಪ್ರದಶರ್ಿಸಿದ್ದಾರೆ. ಒಂಟಿಯಾಗಿ ಸೆರೆ ಸಿಕ್ಕಿದ ತಿಮ್ಮಯ್ಯ ಆಗಷ್ಟೆ ತಲೆಗೆ ಚೌರ ಮಾಡಿಸಿಕೊಂಡು ಬಂದಿದ್ದವರು, ಗೌಡರ ಆಳುಗಳಿಂದ ಚಪ್ಪಲಿ ಪ್ರಹಾರಕ್ಕೆ ಒಳಗಾಗಿದ್ದಾರೆ. ಅಸಹನೆಯಿಂದ ಕುದಿಯುತ್ತಿದ್ದ ಗೌಡರೂ ತಮ್ಮದೊಂದು ಚಪ್ಪಲಿಯನ್ನು ಹುಡುಕಿ ತಿಮ್ಮಯ್ಯನ ತಲೆಯ ಮೇಲೆ ಬಡಿದಿದ್ದಾರೆ. ತಿಮ್ಮಯ್ಯ, ಗೌಡರ ಕಾಲ ಬಳಿ ಕುಸಿದು `ದಮ್ಮಯ್ಯ ಬಿಟ್ಟು ಬಿಡಿ..' ಎಂದು ಅಂಗಲಾಚಿಕೊಂಡು ಅಂತೂ ಹೊರಗಡೆ ಬಂದಿದ್ದಾರೆ. ಹೆಬ್ಬಾಗಿಲ ಹೊರಗಡೆ ಬಿಟ್ಟಿದ್ದ ತಮ್ಮ ಹೊಸ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದೇ ಊರ ಕಡೆ ದೌಡಾಯಿಸಿದ್ದಾರೆ. ತಿಮ್ಮಯ್ಯನಿಗೆ ಗೌಡರ ಮನೆಯಲ್ಲಿ ಶಿಕ್ಷೆಯಾದ ಸಂಗತಿ ಒಂದೆರಡು ದಿನಗಳಲ್ಲಿ ಗೌಡರ ಮನೆಯ ಆಳುಗಳ ಮೂಲಕ ನಮ್ಮೂರಿಗೆ ತಲುಪಿ ಮನೆಯವರ ಪಿಸುಮಾತಿಗೂ ಕಾರಣವಾಗಿತ್ತು. ಪಟೇಲಿಕೆಯೂ ಇದ್ದ ಗೌಡರ ದೌರ್ಜನ್ಯದ ಸುದ್ದಿ ಕೇಳಿದಾಗ ಅಪ್ಪ ಸಾಲದ ಕಂತು ಕಟ್ಟಲು ಮನಿ ಆರ್ಡರ್ ಮಾಡುವ ಮಾರ್ಗ ಅನುಸರಿಸಿ ಎಷ್ಟು ಒಳ್ಳೆಯ ಕೆಲಸ ಮಾಡಿದ ಎನಿಸಿತ್ತು.
ಹೈಸ್ಕೂಲಿನಲ್ಲಿ ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ನಾನು `ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಅದು ಶಾಲೆಯ ಗ್ರಂಥಾಲಯಕ್ಕೆ ಬಂದ ತಕ್ಷಣವೇ ಓದಿಬಿಟ್ಟಿದ್ದೆ. ಅದನ್ನು ಎಷ್ಟರಮಟ್ಟಿಗೆ ಹಚ್ಚಿಕೊಂಡಿದ್ದೆ ಎಂದರೆ ನಾನು ಹೈಸ್ಕೂಲು ಕಲಿಯಲು ನೆಲೆಸಿದ್ದ ಹುಳುಗದ್ದೆಯಿಂದ ಪೇಟೆಗೆ ಎರಡು ಮೈಲು ನಡೆದುಕೊಂಡು ಬರುವಾಗ ಕೂಡ ಓದುತ್ತಿದ್ದೆ. ಶಾಲೆಯಿಂದ ಮನೆಗೆ ಮರಳುವಾಗ ರಸ್ತೆಯ ಬದಿ ನಿಧಾನವಾಗಿ ನಡೆಯುತ್ತಾ ಅದನ್ನು ಓದುತ್ತಿದ್ದೆ. ಅದನ್ನು ಪೂತರ್ಿ ಓದಿ ಮುಗಿಸಿದ ಮೇಲೆಯೇ ನಾನು ಇತರ ಪಠ್ಯದ ಕಡೆ ಗಮನ ಹರಿಸಿದ್ದೆ. ಅಷ್ಟರಮಟ್ಟಿಗೆ `ಮಲೆಗಳಲ್ಲಿ ಮದುಮಗಳು' ನನ್ನನ್ನು ಆವರಿಸಿಕೊಂಡಿತ್ತು. ಬೆಟ್ಟಳ್ಳಿ ಕಲ್ಲಯ್ಯಗೌಡರ ಮನೆ ಪಡಸಾಲೆಯಲ್ಲಿ ದೊಡ್ಡಬೀರನ ಮಗ ಸಣ್ಣಬೀರನಿಗೆ ವಸೂಲಿ ಸಾಬರಿಂದ `ಹೊನ್ನಳ್ಳಿ ಹೊಡ್ತ' ಕೊಡಿಸಿದ ಸಂದರ್ಭ ಓದುತ್ತಿದ್ದಾಗ ನೆನಪಿಗೆ ಬಂದದ್ದೇ ಆಯುಷ್ಕರ್ಮಕ್ಕೆ ಹೋಗಿದ್ದ ನಮ್ಮೂರ ತಿಮ್ಮಯ್ಯ ಗಿಕರ್ಿ ಮೆಟ್ಟಿನ ದೆಸೆಯಿಂದ ಗೌಡರ ಆಳುಗಳಿಂದ ಹೊಡೆತ ತಿಂದ ಪ್ರಸಂಗ.
* * *
ರಿಪ್ಪನ್ಪೇಟೆಯಲ್ಲಿ ನೂತನ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ನಾಲ್ಕರಿಂದ ಏಳನೆಯ ತರಗತಿಯವರೆಗೆ ಓದಿ ಅಲ್ಲಿದ್ದ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿದೆ. ಸೋದರ ಮಾವನ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದೆ. ವಿಜ್ಞಾನ, ಗಣಿತದ ಪ್ರಪಂಚಕ್ಕೆ ತೆರೆದುಕೊಂಡವನಿಗೆ ಓದಿನ ಹಸಿವು ಹೆಚ್ಚಿಸಿದ ಅವಧಿ ಅದು. ನನಗೆ ಐದನೆಯ ತರಗತಿಯಿಂದ ಜೊತೆ ಸೇರಿದ ಬರುವೆ ತಿಮ್ಮಪ್ಪ ಜನ್ಮಾಂತರದ ಬಂಧುವಾಗಿ ಹೋದ. ಹೈಸ್ಕೂಲು ದಿನಗಳಲ್ಲಿ ಇಬ್ಬರೂ ಒಂದೇ ಕೋಣೆಯಲ್ಲಿ ಇದ್ದೆವು. ಇಬ್ಬರಿಗೂ ಭವಿಷ್ಯದ ಬಗ್ಗೆ ಖಚಿತ ಗುರಿ ಇರಲಿಲ್ಲ. ಆದರೆ, ಬೀಜಗಣಿತ, ರೇಖಾಗಣಿತದ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಹೊತ್ತುಗೊತ್ತಿನ ಪರಿವೆ ಇಲ್ಲದೆ ತೊಡಗಿಕೊಂಡಿರುತ್ತಿದ್ದೆವು. ನಮ್ಮ ಹೈಸ್ಕೂಲು ಮೇಷ್ಟರುಗಳು ಆ ಹದಿವಯಸ್ಸಿನಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸಿದ್ದರು. ಹೆಡ್ಮಾಸ್ಟರ್ ಮುರುಗೇಂದ್ರಪ್ಪನವರು `ಸ್ಮಶಾನ ಕುರುಕ್ಷೇತ್ರ' ನಾಟಕವನ್ನು, ಅದು ಪಠ್ಯವಾಗಿರದಿದ್ದರೂ ಓದಿ ನಮ್ಮಲ್ಲಿ ಓದುವ ಹಸಿವನ್ನು ಹುಟ್ಟಿಸಿದ್ದರು. ಪಂಡಿತ ನಾಗೇಂದ್ರ ಭಟ್ಟರು ಕನ್ನಡದ ವ್ಯಾಕರಣವನ್ನು ತಲಸ್ಪಶರ್ಿಯಾಗಿ ಕಲಿಸಿದ್ದರು. ನಾರಾಯಣ ಭಟ್ಟರು ಹಳಗನ್ನಡ ಪಾಠ ಮಾಡುತ್ತಾ ಸುಕನಾಸ ಮಂತ್ರಿ ಚಂದ್ರಾಪೀಡನಿಗೆ ನೀಡಿದ ಉಪದೇಶದ ನೆಪದಲ್ಲಿ ಬಾಣನ ಕಾದಂಬರಿಯ ಸಂಸ್ಕೃತ ಮೂಲದ ಸ್ವಾರಸ್ಯವನ್ನು ಹೇಳಿ ಕಾದಂಬರಿ, ಮಹಾಶ್ವೇತೆಯರ ಹೆಸರುಗಳನ್ನು ಪರಿಚಯಿಸಿದ್ದರು. ಎಂ.ಆರ್.ಲಿಂಗರಾಜು, ಎಂ.ಈಶ್ವರಪ್ಪ, ಅನಂತಮೂತರ್ಿ, ಗೋಪಾಲರಾವ್ ಅವರೆಲ್ಲ ನಮಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಸುಭದ್ರವಾದ ಅಡಿಪಾಯ ಹಾಕಿಕೊಟ್ಟವರು (ಐದನೆಯ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಸದಾ ಜೊತೆಯಾಗಿರುತ್ತಿದ್ದ ನಾವಿಬ್ಬರು ಎಸ್ಸೆಸ್ಸೆಲ್ಸಿ ಮುಗಿದ ನಂತರ ಬೇರೆ ಬೇರೆಯಾದರೂ ಆ ದಿನಗಳ ಆಪ್ತತೆ ಆರು ದಶಕಗಳ ನಂತರವೂ ಹೆಚ್ಚಾಗುತ್ತಿದೆ).
ರಿಪ್ಪನ್ಪೇಟೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮೇಲೆ ಮುಂದೇನು ಎನ್ನುವ ಪ್ರಶ್ನೆ ಮನೆಯಲ್ಲಿ ಎದ್ದಿತು. ಆಗ ಒಂದೇ ಪ್ರಯತ್ನದಲ್ಲಿ ತೇರ್ಗಡೆಯಾಗುವುದು ದೊಡ್ಡ ಸಾಧನೆ ಎಂದು ಪರಿಗಣಿತವಾಗುತ್ತಿದ್ದ ಕಾಲ. ಪೇಟೆಗೊಮ್ಮೆ ಹೋಗಿದ್ದ ಅಪ್ಪ ತನ್ನ ವಾರಿಗೆಯ ಕೆಲವು ಗೌಡರುಗಳಲ್ಲಿ ಸಲಹೆ ಕೇಳಿದಾಗ `ಮುಂದೆ ಕಾಲೇಜು.. ಅದೂ ಇದೂ ಅಂತ ತಲೆ ಕೆಡಿಸ್ಗೋಬ್ಯಾಡ.. ಎಲ್ಲಾದರೂ ಮೇಷ್ಟರ ಕೆಲಸ ಹುಡುಕೋದಕ್ಕೆ ಹೇಳು' ಎಂದು ಹೇಳಿದ್ದರಂತೆ. ಅಪ್ಪ ಮನೆಯಲ್ಲಿ ಅದನ್ನೇ ಹೇಳಿದಾಗ ನನಗೆ ಅದೂ ಆಗಬಹುದೇನೋ ಅನ್ನಿಸಿತ್ತು. ಅಪ್ಪನೂ ಯೋಚನೆ ಮಾಡಿದ್ದಿರಬೇಕು. ಮೊದಲಿಂದಲೂ ಪಾಸಾಗುತ್ತಲೇ ಬಂದಿದ್ದ ನನ್ನ ವಿದ್ಯಾಭ್ಯಾಸ ಅಷ್ಟಕ್ಕೆ ಮೊಟಕು ಮಾಡಲು ಅವನು ಇಷ್ಟಪಡಲಿಲ್ಲ. ಅದು ಮತ್ತೆ ಮನೆಯಲ್ಲಿ ಚಚರ್ೆಗೆ ಬಂತು. ಎಲ್ಲಾದರೂ ಉಚಿತ ವಿದ್ಯಾಥರ್ಿ ನಿಲಯದ ಸೌಲಭ್ಯ ಸಿಕ್ಕಿದರೆ ಮೇಲು ಖಚರ್ಿಗೆ ಹಣ ಕೊಡಬಹುದು ಎಂಬ ಮಾತು ಮನೆಯ ಯಜಮಾನಿಕೆ ನಡೆಸುತ್ತಿದ್ದ ದೊಡ್ಡಣ್ಣನಿಂದ ಬಂದಿತು. ಎಸ್ಎಸ್ಎಲ್ಸಿ ಪಾಸಾದ ಮೇಲೆ ನಮ್ಮೂರು ಸಮೀಪದ ಕೋಣಂದೂರಿನಲ್ಲಿ ಆಗಷ್ಟೆ ಪಿಯು ಕಾಲೇಜು ಆರಂಭವಾಗಿದ್ದು ಅಲ್ಲಿಯೇ ಶಿಕ್ಷಣ ಮುಂದುವರಿಸಲು ಮನಸ್ಸು ಮಾಡುತ್ತಿದ್ದೆನೇನೋ. ಆದರೆ ಉಚಿತ ವಿದ್ಯಾಥರ್ಿನಿಲಯದ ಅನುಕೂಲ ಇದ್ದ ಕಾರಣ ಎಸ್ಎಸ್ಎಲ್ಸಿ ಫಲಿತಾಂಶ ಬರುತ್ತಲೇ ಬೆಂಗಳೂರಿನತ್ತ ಮುಖ ಮಾಡಿದೆ. (ಮುಂದುವರಿಯಲಿದೆ...)